ಒಂದೆಡೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂಬ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಿ, ಕನ್ನಡದ ಶಾಲೆಗಳು ಮುಚ್ಚಲು ಸರ್ಕಾರವೇ ಕಾರಣವಾಗಿದೆ. ಇನ್ನೊಂದೆಡೆ, ಭಕ್ತಿಯಿಲ್ಲದೆ ದೇವರನ್ನು ಆಡಂಬರದ ರೀತಿಯಲ್ಲಿ ಮೆರೆಸುವಂತೆ ಸಮ್ಮೇಳನ ನಡೆಸಲು ಹೊರಟಿರುವುದು ತರವಲ್ಲ. ನೆರೆ ಬಂದು ಕನ್ನಡ ನಾಡು ನಲುಗಿದೆ, ಕೆಲವರು ಮನೆಗಳನ್ನು ಕಳೆದುಕೊಂಡು ಪರಿತಪಿಸುತ್ತಿದ್ದಾರೆ. ಸಮ್ಮೇಳನವನ್ನು ಸರಳವಾಗಿ ಆಚರಿಸುವುದರಿಂದ ಉಳಿಯುವ ಹಣದಲ್ಲಿ, ಕಲ್ಯಾಣ ಕರ್ನಾಟಕ ಭಾಗದ ಕನ್ನಡ ಶಾಲೆಗಳಿಗೆ ಕನಿಷ್ಠ ಸೌಲಭ್ಯ ಒದಗಿಸಲು ಮನಸ್ಸು ಮಾಡಬೇಕು.