ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಮನಕಾರಿ ಸೆಕ್ಷನ್‌ ರದ್ದಾಗಲಿ

ಅಕ್ಷರ ಗಾತ್ರ

ದೇಶದ್ರೋಹಕ್ಕೆ ಸಂಬಂಧಿಸಿದ ಶಿಕ್ಷೆಗೆ ಗುರಿಪಡಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) 124 (ಎ) ಸೆಕ್ಷನ್‌ ಅನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಒಪ್ಪಿಗೆ ಸೂಚಿಸಿರುವುದು ಸ್ವಾಗತಾರ್ಹ ನಡೆ. ಬ್ರಿಟಿಷ್‌ ಸರ್ಕಾರ ಜಾರಿಗೆ ತಂದಿದ್ದ ಈ ಕಾನೂನಿನ ದುರ್ಬಳಕೆ ಆಳುವ ಸರ್ಕಾರದಿಂದ ಆಗುತ್ತಲೇ ಇದೆ. ಸರ್ಕಾರವನ್ನು ಟೀಕಿಸುವ ಮತ್ತು ವೈಫಲ್ಯಗಳನ್ನು ಎತ್ತಿಹಿಡಿಯುವ ಪ್ರಯತ್ನಗಳನ್ನು ಈ ಸೆಕ್ಷನ್‌ ಬಳಸಿಕೊಂಡು
ಹತ್ತಿಕ್ಕಲಾಗುತ್ತಿದೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗುತ್ತಿದೆ. ಹಲವು ರಾಷ್ಟ್ರಗಳು ಈಗಾಗಲೇ ಈ ಬಗೆಯ ಕಾನೂನನ್ನು ರದ್ದುಪಡಿಸಿವೆ.

ಕಳೆದ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಈ ಕಾನೂನನ್ನು ರದ್ದು ಮಾಡುವುದಾಗಿ ಘೋಷಿಸಿತ್ತು. ಅದನ್ನು ಇನ್ನುಳಿದ ಪಕ್ಷಗಳು ದೇಶದಲ್ಲಿ ಅರಾಜಕತೆಗೆ ಅವಕಾಶ ಮತ್ತು ಭಯೋತ್ಪಾದಕರಿಗೆ ಆಹ್ವಾನ ಕೊಟ್ಟಂತೆ ಎಂದು ಬಿಂಬಿಸಿ ಲಾಭ ಪಡೆದವು. ಆಡಳಿತಾರೂಢ ಬಿಜೆಪಿಯು ಕೆಲವು ಹಳೆಯ ಕಾನೂನುಗಳನ್ನು ರದ್ದುಪಡಿಸುವುದಾಗಿ ಹೇಳಿದ್ದರೂ ಓಬೀರಾಯನ ಕಾಲದ ಈ ಸೆಕ್ಷನ್‌ ರದ್ದುಗೊಳಿಸುವ ಬಗ್ಗೆ ಜಾಣಮೌನ ವಹಿಸಿದೆ. ಈಗ ಯಾವ ಪಕ್ಷವೂ ಈ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಕಾರಣ ತಮ್ಮ ಪಕ್ಷದ ಧುರೀಣರ ಬಂಧನವಾದಾಗ ಮಾತ್ರ ಅಬ್ಬರಿಸುವ ರಾಜಕೀಯ ಪಕ್ಷಗಳು ಜನಸಾಮಾನ್ಯರ ಕಷ್ಟಕ್ಕೆ ಓಗೊಡುವುದು ಕಡಿಮೆ. ಇಂತಹ ಸಮಯದಲ್ಲಿ ನ್ಯಾಯಾಲಯವು ಪರಾಮರ್ಶಿಸಿ ಸ್ವಾಗತಾರ್ಹ ತೀರ್ಪು ನೀಡಲಿ ಎಂದು ಆಶಿಸೋಣ.

- ಗಣಪತಿ ನಾಯ್ಕ್,ಕಾನಗೋಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT