ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿನ ಕೈದಿಗಳು ತಮ್ಮ ಅನುಭವಗಳನ್ನು ಕವನಗಳ ಮೂಲಕ ಹೊರಹಾಕಿದ್ದು, ಕಾರಾಗೃಹದ ಅಧಿಕಾರಿಗಳು ಅವುಗಳಿಗೆ ಸಂಕಲನದ ರೂಪ ನೀಡಿದ್ದಾರೆ (ಪ್ರ.ವಾ., ಏ. 7). ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸಿ ಭಾವನೆ ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟಿರುವುದು ಪರಿಣಾಮಕಾರಿಯಾದ ಮನಃ ಪರಿವರ್ತನೆ ಹಾಗೂ ಮೆಚ್ಚುವಂತಹ ಸಂಗತಿ.