ಶ್ರೀಲಂಕಾ ಬೇರೆ ಬೇರೆ ನೆಲೆಯಲ್ಲಿ ತೀವ್ರ ಬಿಕ್ಕಟ್ಟು ಎದುರಿಸುತ್ತಿದ್ದು ಅರಾಜಕತೆಯತ್ತ ಸಾಗುತ್ತಿದೆ. ಮಿತಿಮೀರಿದ ವಿದೇಶಿ ಸಾಲ, ಭ್ರಷ್ಟಾಚಾರ, ಸ್ವಜನಪಕ್ಷಪಾತದಿಂದಾಗಿ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ, ಬೆಲೆ ಗಗನಕ್ಕೇರಿದೆ. ಇದರಿಂದ ತತ್ತರಿಸಿರುವ ಜನಸಾಮಾನ್ಯರು ಬೀದಿಗಿಳಿದಿದ್ದಾರೆ. ಈ ಸಂದರ್ಭದಲ್ಲಿ ದ್ವೀಪರಾಷ್ಟ್ರಕ್ಕೆ ಎಲ್ಲ ದೇಶಗಳ ಸಹಕಾರದ ಅಗತ್ಯವಿದೆ. ಭಾರತವು ಶ್ರೀಲಂಕಾಕ್ಕೆ ಸೈನ್ಯದ ನೆರವು ನೀಡುವುದಕ್ಕೆ ಸಂಬಂಧಿಸಿದ ವರದಿಗಳನ್ನು ಅಲ್ಲಿನ ಭಾರತೀಯ ಹೈಕಮಿಷನ್ ಅಲ್ಲಗಳೆದಿದೆ. ಅದೇನೇ ಇರಲಿ, ಯಾವುದೇ ಕಾರಣಕ್ಕೂ ಭಾರತವು ಶ್ರೀಲಂಕಾಕ್ಕೆ ಸೈನ್ಯವನ್ನು ಕಳುಹಿಸಬಾರದು.