ಭದ್ರಾವತಿ ತಾಲ್ಲೂಕಿನ ಕಂದಾಳ್– ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೆರೆಹಿಡಿದ ನೂರಾರು ನಾಯಿಗಳನ್ನು ಅರಣ್ಯದಲ್ಲಿ ಸಜೀವ ಸಮಾಧಿ ಮಾಡಿರುವ ಸುದ್ದಿ (ಪ್ರ.ವಾ., ಸೆ. 9) ಓದಿ ಬಹಳ ಬೇಸರವಾಯಿತು. ಈಗ್ಗೆ ಎರಡು ದಿನಗಳ ಹಿಂದೆ ನನ್ನ ಕಾಲಿಗೆ ನಾಯಿ ಕಡಿದು ಚುಚ್ಚುಮದ್ದು ಪಡೆಯುತ್ತಿರುವ ನನಗೇ ಈ ವಿಷಯ ತಿಳಿದು ಹೇಳಲಸದಳವಾದ ವ್ಯಥೆ ಆಗಿದೆ. ಪಾಪ, ಮೂಕಪ್ರಾಣಿಗಳು ಅರಿಯದೆ ಮಾಡಿದ ತಪ್ಪಿಗೆ ಅವುಗಳನ್ನು ಹೀಗೆ ಕೊಂದು ಹಾಕುವುದು ಸರಿಯಲ್ಲ.