ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಹಾಗೂ ನಯನ ರಂಗಮಂದಿರದ ಬಾಡಿಗೆ ಪರಿಷ್ಕರಣೆ ಕುರಿತ ಸಚಿವರ ಹೇಳಿಕೆ ಸ್ವಾಗತಾರ್ಹ. ಆದರೆ ಇಲ್ಲಿ ಮುಖ್ಯವಾಗಿ ಆಗಬೇಕಿರುವ ಗುರುತರ ಬದಲಾವಣೆ ಎಂದರೆ, ರಂಗತಂಡವೊಂದು ಕಲಾಕ್ಷೇತ್ರವನ್ನು ಮೊದಲೇ ಕಾಯ್ದಿರಿಸಿದ್ದರೆ, ಅದೇ ದಿನ ಸರ್ಕಾರಿ ಕಾರ್ಯಕ್ರಮ ನಿಗದಿಯಾಯಿತೆಂಬ ಕಾರಣಕ್ಕೆ ರಂಗತಂಡಕ್ಕೆ ನೀಡಿದ್ದ ಬಳಕೆಯ ಅವಕಾಶವನ್ನು ಹಿಂಪಡೆಯುವ ಹಾಗಿಲ್ಲ. ಹಾಗೇನಾದರೂ ಪಡೆದರೆ ತಂಡಕ್ಕೆ ಆದ ಆರ್ಥಿಕ ನಷ್ಟವನ್ನು ಸರ್ಕಾರ ಭರಿಸಬೇಕು.