ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಇನ್ನೊಂದು ಇಲಾಖೆಯಲ್ಲಿ ವಿಲೀನಗೊಳಿಸಲು ಸರ್ಕಾರ ಹೊರಟಿದೆ. ಅಸಹಾಯಕ ಕಲಾವಿದರಿಗೆ, ಸಾಹಿತಿಗಳಿಗೆ ₹ 2,000 ನೆರವು ನೀಡಿ ತನ್ನ ಉದಾರ ಸಂಸ್ಕೃತಿಯನ್ನು ಮೆರೆದಿದೆ! ಇಂತಹ ಸ್ಥಿತಿಯಲ್ಲಿ, ‘ಇದೇನ ಸಭ್ಯತೆ, ಇದೇನ ಸಂಸ್ಕೃತಿ...’ ಎಂಬ ಸಿನಿಮಾ ಹಾಡು ನೆನಪಿಗೆ ಬರುತ್ತದೆ.