ತಮ್ಮ ದೇಶದಿಂದ ಹೊರದೂಡಲ್ಪಟ್ಟು ನಿರಾಶ್ರಿತರಾಗಿ ಈ ದೇಶಕ್ಕೆ ವಲಸೆ ಬಂದ ಲಕ್ಷಾಂತರ ಟಿಬೆಟಿಯನ್ನರಿಗೆ ರಾಜ್ಯದ ಬೈಲುಕುಪ್ಪೆ ಮತ್ತು ಮುಂಡಗೋಡದಲ್ಲಿ ಆಶ್ರಯ ನೀಡಲಾಗಿದೆ. ಈವರೆಗೆ ಇವರು ಇತರರಂತೆ ಶಾಲೆಗಳಲ್ಲಿ ಕನ್ನಡ ಭಾಷೆ ಕಲಿಯುತ್ತಿದ್ದರು. ಆದರೆ, ಈಗ ಇವರು ತಮಗೆ ಕನ್ನಡ ಕಲಿಯಲು ಕಷ್ಟವಾಗಿದ್ದು, ಕನ್ನಡ ಕಲಿಕೆಯಿಂದ ತಮಗೆ ವಿನಾಯಿತಿ ನೀಡಬೇಕು ಎಂದು ಕೋರುತ್ತಿದ್ದಾರೆ.