<p><strong>ಬಿಹಾರಕ್ಕೆ ರಾಷ್ಟ್ರಪತಿ ಆಡಳಿತ</strong><br />ನವದೆಹಲಿ, ಜೂ. 29– ರಾಷ್ಟ್ರಪತಿ ಡಾ. ಜಾಕೀರ್ ಹುಸೇನ್ರವರು ಇಂದು ಬಿಹಾರ ವಿಧಾನಸಭೆಯನ್ನು ವಿಸರ್ಜಿಸಿ, ಬಿಹಾರದ ಆಡಳಿತವನ್ನು ತಾವೇ ವಹಿಸಿಕೊಂಡರು.</p>.<p><strong>ಚೀನದಲ್ಲಿ ರೆಡ್ಗಾರ್ಡ್ ಗುಂಪುಗಳ ಘರ್ಷಣೆ</strong><br />ಟೈಪೆ, ಜೂ. 29– ಮೇ 17 ರಂದು ನೈರುತ್ಯ ಚೀನದ ಯುನ್ ಅನಿ ಪಟ್ಟಣದಲ್ಲಿ ಎರಡು ರೆಡ್ಗಾರ್ಡ್ ಗುಂಪುಗಳ ನಡುವೆ ತೀವ್ರ ಘರ್ಷಣೆ ಸಂಭವಿಸಿತೆಂದು ಟೈವಾನ್ ಗುಪ್ತ ಪೊಲೀಸ್ ವಲಯಗಳು ಇಂದು ವರದಿ ಮಾಡಿವೆ. ಈ ಘರ್ಷಣೆಯಲ್ಲಿ ಅನೇಕ ಮಂದಿ ರೆಡ್ಗಾರ್ಡ್ಗಳು ಕೊಲ್ಲಲ್ಪಟ್ಟರೆಂದು ವರದಿ ತಿಳಿಸಿದೆ.</p>.<p><strong>ಕಾಶ್ಮೀರ ಭಾರತಕ್ಕೆ ಸೇರಿದ ಭಾಗ: ಅರ್ಷದ್ ಹುಸೇನ್ ಹೇಳಿಕೆಗೆ ಪ್ರತಿಕ್ರಿಯೆ</strong><br />ನವದೆಹಲಿ, ಜೂ. 29– 1947ರಲ್ಲಿ ಇಡೀ ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಸೇರಿತೆಂಬುದನ್ನು ಭಾರತ ಸ್ಪಷ್ಟಪಡಿಸುತ್ತದೆ ಎಂದು ವಿದೇಶಾಂಗ ಸಚಿವ ಶಾಖೆ ವಕ್ತಾರರು ಇಂದು ತಿಳಿಸಿದರು.</p>.<p>ಪಾಕಿಸ್ತಾನ್ ನ್ಯಾಷನಲ್ ಅಸೆಂಬ್ಲಿಯಲ್ಲಿ ವಿದೇಶಾಂಗ ಸಚಿವ ಅರ್ಷದ್ ಹುಸೇನ್ ನಿನ್ನೆ ಕೊಟ್ಟ ಹೇಳಿಕೆಗೆ ವಕ್ತಾರರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದರು.</p>.<p><strong>ಚಿನ್ನ ನಿಯಂತ್ರಣ ಶಾಸನಕ್ಕೆ ಜೀವದಾನ: ಸುಗ್ರೀವಾಜ್ಞೆ</strong><br />ನವದೆಹಲಿ, ಜೂ. 29– ಚಿನ್ನದ ಹತೋಟಿಗೆ ಸಂಬಂಧಿಸಿದ ಕಾನೂನನ್ನು ಮುಂದುವರೆಸಲು ರಾಷ್ಟ್ರಪತಿ ಡಾ. ಜಾಕೀರ್ ಹುಸೇನ್ ಅವರು ಇಂದು ಸುಗ್ರೀವಾಜ್ಞೆಯೊಂದನ್ನು ಹೊರಡಿಸಿದರು.</p>.<p><strong>ಬಂಗಾರದ ಗಣಿ – ಕಪ್ಪತಗುಡ್ಡ</strong><br />ಬೆಂಗಳೂರು, ಜೂ. 29– ಬಂಗಾರದ ಉತ್ಪಾದನೆಗೆ ಹೆಸರಾದ ಮೈಸೂರು ರಾಜ್ಯದ ಕೋಲಾರ ಮತ್ತು ಹಟ್ಟಿ ಚಿನ್ನದ ಗಣಿಗಳ ಸಾಲಿಗೆ ಧಾರವಾಡ ಜಿಲ್ಲೆಯ ಕಪ್ಪತಗುಡ್ಡವೂ ಸೇರುವ ಸೂಚನೆ ಕಂಡು ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಹಾರಕ್ಕೆ ರಾಷ್ಟ್ರಪತಿ ಆಡಳಿತ</strong><br />ನವದೆಹಲಿ, ಜೂ. 29– ರಾಷ್ಟ್ರಪತಿ ಡಾ. ಜಾಕೀರ್ ಹುಸೇನ್ರವರು ಇಂದು ಬಿಹಾರ ವಿಧಾನಸಭೆಯನ್ನು ವಿಸರ್ಜಿಸಿ, ಬಿಹಾರದ ಆಡಳಿತವನ್ನು ತಾವೇ ವಹಿಸಿಕೊಂಡರು.</p>.<p><strong>ಚೀನದಲ್ಲಿ ರೆಡ್ಗಾರ್ಡ್ ಗುಂಪುಗಳ ಘರ್ಷಣೆ</strong><br />ಟೈಪೆ, ಜೂ. 29– ಮೇ 17 ರಂದು ನೈರುತ್ಯ ಚೀನದ ಯುನ್ ಅನಿ ಪಟ್ಟಣದಲ್ಲಿ ಎರಡು ರೆಡ್ಗಾರ್ಡ್ ಗುಂಪುಗಳ ನಡುವೆ ತೀವ್ರ ಘರ್ಷಣೆ ಸಂಭವಿಸಿತೆಂದು ಟೈವಾನ್ ಗುಪ್ತ ಪೊಲೀಸ್ ವಲಯಗಳು ಇಂದು ವರದಿ ಮಾಡಿವೆ. ಈ ಘರ್ಷಣೆಯಲ್ಲಿ ಅನೇಕ ಮಂದಿ ರೆಡ್ಗಾರ್ಡ್ಗಳು ಕೊಲ್ಲಲ್ಪಟ್ಟರೆಂದು ವರದಿ ತಿಳಿಸಿದೆ.</p>.<p><strong>ಕಾಶ್ಮೀರ ಭಾರತಕ್ಕೆ ಸೇರಿದ ಭಾಗ: ಅರ್ಷದ್ ಹುಸೇನ್ ಹೇಳಿಕೆಗೆ ಪ್ರತಿಕ್ರಿಯೆ</strong><br />ನವದೆಹಲಿ, ಜೂ. 29– 1947ರಲ್ಲಿ ಇಡೀ ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಸೇರಿತೆಂಬುದನ್ನು ಭಾರತ ಸ್ಪಷ್ಟಪಡಿಸುತ್ತದೆ ಎಂದು ವಿದೇಶಾಂಗ ಸಚಿವ ಶಾಖೆ ವಕ್ತಾರರು ಇಂದು ತಿಳಿಸಿದರು.</p>.<p>ಪಾಕಿಸ್ತಾನ್ ನ್ಯಾಷನಲ್ ಅಸೆಂಬ್ಲಿಯಲ್ಲಿ ವಿದೇಶಾಂಗ ಸಚಿವ ಅರ್ಷದ್ ಹುಸೇನ್ ನಿನ್ನೆ ಕೊಟ್ಟ ಹೇಳಿಕೆಗೆ ವಕ್ತಾರರು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದರು.</p>.<p><strong>ಚಿನ್ನ ನಿಯಂತ್ರಣ ಶಾಸನಕ್ಕೆ ಜೀವದಾನ: ಸುಗ್ರೀವಾಜ್ಞೆ</strong><br />ನವದೆಹಲಿ, ಜೂ. 29– ಚಿನ್ನದ ಹತೋಟಿಗೆ ಸಂಬಂಧಿಸಿದ ಕಾನೂನನ್ನು ಮುಂದುವರೆಸಲು ರಾಷ್ಟ್ರಪತಿ ಡಾ. ಜಾಕೀರ್ ಹುಸೇನ್ ಅವರು ಇಂದು ಸುಗ್ರೀವಾಜ್ಞೆಯೊಂದನ್ನು ಹೊರಡಿಸಿದರು.</p>.<p><strong>ಬಂಗಾರದ ಗಣಿ – ಕಪ್ಪತಗುಡ್ಡ</strong><br />ಬೆಂಗಳೂರು, ಜೂ. 29– ಬಂಗಾರದ ಉತ್ಪಾದನೆಗೆ ಹೆಸರಾದ ಮೈಸೂರು ರಾಜ್ಯದ ಕೋಲಾರ ಮತ್ತು ಹಟ್ಟಿ ಚಿನ್ನದ ಗಣಿಗಳ ಸಾಲಿಗೆ ಧಾರವಾಡ ಜಿಲ್ಲೆಯ ಕಪ್ಪತಗುಡ್ಡವೂ ಸೇರುವ ಸೂಚನೆ ಕಂಡು ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>