ನಮ್ಮ ಪರಂಪರೆಯ ವಿನಾಶಕ ಆಯಾಮಗಳನ್ನು ತೊರೆದು ಅದರ ವಿಧಾಯಕ ಗುಣಗಳನ್ನು ರೂಢಿಸಿಕೊಳ್ಳುವ ಕ್ರಮದ ಬಗ್ಗೆ ತ್ರೈವರ್ಣೀಕರು ಯೋಚಿಸಬೇಕು. ಹತ್ತಾರು ಹಳ್ಳಿಗಳಿಂದ ನೂರಾರು ಶ್ರಮಿಕ ಬಂಧುಗಳು ಲಾರಿಗಟ್ಟಲೆ ಮರನೆಲ್ಲಿ ಕೊಂಬೆ-ರೆಂಬೆ-ಶಾಖೆಗಳನ್ನು ಕಡಿದು ಮಾರಾಟಕ್ಕೆ ತಂದಿದ್ದುದನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ. ಏಕೆಂದರೆ ಅವರಿಗೆ ಇದು ಜೀವನೋಪಾಯದ ಸಾಧನ. ಆದರೆ ಶಿಕ್ಷಿತ, ಉನ್ನತ ವರ್ಗದ ಜನರು ಹವಾಮಾನ ಬದಲಾವಣೆಯ ಭಯಾನಕ ಪರಿಣಾಮಗಳ ಪರಿವೆಯಿಲ್ಲದೆ ನೆಲ್ಲಿಗೆ ಹಾತೊರೆಯುವುದನ್ನು ಏಕೆ ಬಿಡಬಾರದು? ನಮ್ಮ ಧಾರ್ಮಿಕ ಆಚರಣೆಗೆ ಮರಗಿಡಗಳ ಹನನ ನಿಲ್ಲಬೇಕು.