ಉದಾಹರಣೆಗೆ, ಗ್ರಾಮದಲ್ಲಿ ಆಸಕ್ತ ಓದುಗರು ಇದ್ದಾರೆಯೇ ಎಂಬ ಸಮೀಕ್ಷೆ ನಡೆಸುವುದು ಮತ್ತು ಆಸಕ್ತರ ಸಂಖ್ಯೆ ಇಲ್ಲದ ಕಡೆ ಅಲ್ಲಿರುವ ಜನರಲ್ಲಿ ಓದುವ ಆಸಕ್ತಿ ಕೆರಳಿಸುವಂತಹ ಕಾರ್ಯಕ್ರಮಗಳನ್ನು ಗ್ರಂಥಾಲಯ ಇಲಾಖೆ ಜಾರಿಗೆ ತರಬೇಕಿತ್ತು. ದುರ್ದೈವವೆಂದರೆ, ಓದುಗನನ್ನು ಗಮನದಲ್ಲಿ ಇರಿಸಿಕೊಳ್ಳದೆ ಕೇವಲ ನೌಕರಿ ಸೃಷ್ಟಿಸುವುದು ಹಾಗೂ ಪುಸ್ತಕ, ಪೀಠೋಪಕರಣದಂತಹ ಮೂಲ ಸೌಲಭ್ಯಗಳನ್ನು ಒದಗಿಸುವಂತಹ ಯೋಜನೆಗಳಿಗೇ ಆದ್ಯತೆ ನೀಡಿದ್ದರಿಂದ ಸರ್ಕಾರಕ್ಕೆ ಅನವಶ್ಯಕ ಹೊರೆ ಆದಂತಾಯಿತು.