ಈ ದೇಶದಲ್ಲಿ ಜೀವಕ್ಕೆ ಬೆಲೆ ಎಂಬುದು ಇಲ್ಲವಾಗಿದೆ. ದುರಂತ ಸಂಭವಿಸುತ್ತದೆ, ಸಾವು–ನೋವು ಆಗುತ್ತದೆ. ಆರೋಪ– ಪ್ರತ್ಯಾರೋಪಗಳು ನಡೆಯುತ್ತವೆ. ತನಿಖೆ, ಅಧಿಕಾರಿಗಳ ಅಮಾನತು ಎಂದೆಲ್ಲ ಕಾಲಹರಣ ಆಗುತ್ತದೆ. ಆ ಬಳಿಕ ಎಲ್ಲವನ್ನೂ ಮರೆತುಬಿಡುತ್ತೇವೆ. ಗುಣಮಟ್ಟ, ಉತ್ತರದಾಯಿತ್ವ ಎಂಬ ಪದಗಳು ಅಧಿಕಾರಸ್ಥರಿಗೆ ಅಪಥ್ಯ.