ಕೊರೊನಾ ಹೊಡೆತ, ಅತಿವೃಷ್ಟಿ, ಅನಾವೃಷ್ಟಿ, ಲಾಕ್ಡೌನ್ನಂತಹ ಕಹಿ ವಿದ್ಯಮಾನಗಳಿಂದ ಜನ ಬಸವಳಿ ದಿದ್ದಾರೆ. ಇದನ್ನೆಲ್ಲ ಗಮನಿಸಿದರೆ, ಭವಿಷ್ಯದಲ್ಲಿ ಇನ್ನೂ ಏನೇನು ಸಂಕಷ್ಟ ಎದುರಾಗಬಹುದೋ ಎಂಬ ಚಿಂತೆ ನಾಗರಿಕರನ್ನು ಕಾಡುತ್ತಿದೆ. ಸಾರಿಗೆ ಸಮಸ್ಯೆಗೆ ಶೀಘ್ರ ಪರಿಹಾರ ದೊರಕಿಸುವುದು ಅಗತ್ಯ. ಇದಕ್ಕೆ ಸರ್ಕಾರ ವೇದಿಕೆ ಕಲ್ಪಿಸಲಿ. ನೌಕರರು ಸಹಕರಿಸಲಿ.