ಇತ್ತೀಚಿನ ವರ್ಷಗಳಲ್ಲಿ ಹೀಗೆ ಪ್ರಶಸ್ತಿಗೆ ಅರ್ಜಿ ಹಾಕಿ ತಮ್ಮ ಜಾತಿಯ ಪ್ರಭಾವಿಗಳ ಮನೆಬಾಗಿಲಲ್ಲಿ ನಿಲ್ಲುವ ಸ್ಥಿತಿ ಎದುರಾಗಿದೆ. ಜಾತ್ಯತೀತ ಮೌಲ್ಯಗಳನ್ನು ಮಕ್ಕಳಿಗೆ ಹೇಳಿಕೊಟ್ಟ ಶಿಕ್ಷಕಿ, ಶಿಕ್ಷಕ ಹೀಗೆ ಕೊನೆಯಲ್ಲಿ ಪ್ರಶಸ್ತಿಯ ಆಸೆಗಾಗಿ ತಮ್ಮ ಜಾತಿಯ ವಿಷವರ್ತುಲದಲ್ಲಿ ನಿಲ್ಲುವುದು ಕ್ರೌರ್ಯ. ಆದ್ದರಿಂದ ಪ್ರಶಸ್ತಿ ನೀಡುವ ಇಲಾಖೆಗಳು ಆಯ್ಕೆ ಪ್ರಕ್ರಿಯೆಯನ್ನು ಬದಲಿಸಿ, ಸಮಿತಿಗಳನ್ನು ರಚಿಸಿ ಆಯ್ಕೆ ಮಾಡುವುದು ಸೂಕ್ತ.