ಜನರು ತಮ್ಮ ನಿತ್ಯ ಬದುಕಿಗೆ ಸಹಕಾರಿ ಆಗುವ ಕಸುಬಿಗೆ ಸಂಬಂಧಿಸಿದ ಆಯುಧಗಳನ್ನು ಈ ಹಬ್ಬದಲ್ಲಿ ಪೂಜಿಸಿ ಖುಷಿಪಡುತ್ತಾರೆ. ಹೋರಾಟಕ್ಕೆ, ಹೊಡೆದಾಟಕ್ಕೆ ಬಳಸುವ ಅಸ್ತ್ರಗಳನ್ನೂ ಪೂಜಿಸಿ ಬಳಸಿ ಎಂದು ಸಂಘ ಸಂಸ್ಥೆಗಳ ಮುಖ್ಯಸ್ಥರು ಕರೆ ಕೊಡುವುದು ಸರಿಯಲ್ಲ. ಸಹಬಾಳ್ವೆಯ ಜೀವನ ಮಾಡಬೇಕಾದ ಸಮಾಜದಲ್ಲಿ ಇಂತಹ ಬೆಂಕಿ ಹಚ್ಚುವ ಮಾತನಾಡಿ, ಯುವಕರ ಕಣ್ಣು ಕೆಂಪಾಗಿಸುವುದು ಯಾವ ನ್ಯಾಯ? ಎಲ್ಲ ಧರ್ಮೀಯರೂ ಹೀಗೆಯೇ ಕರೆ ಕೊಟ್ಟು ಪ್ರಚೋದಿಸಿದರೆ, ಸಮಾಜದ ಪರಿಸ್ಥಿತಿ ಏನಾಗಬಹುದು?