<p>‘ಹಿಂದೂಗಳು ಶಸ್ತ್ರಗಳನ್ನು ಪೂಜಿಸಿದರೆ ಸಾಲದು, ಬಳಸುವುದನ್ನೂ ಕಲಿಯಬೇಕು’ ಎಂದು ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಸಹಕಾರ್ಯ ದರ್ಶಿ ಹಾಗೂ ಅಯೋಧ್ಯೆಯ ರಾಮಮಂದಿರ ನವನಿರ್ಮಾಣದ<br />ಉಸ್ತುವಾರಿಯಲ್ಲಿ ಒಬ್ಬರಾದ ಗೋಪಾಲ್ ನಾಗರಕಟ್ಟೆ ಹೇಳಿದ್ದಾರೆ.</p>.<p>(ಪ್ರ.ವಾ., ಅ. 6). ನಮ್ಮದು ಪ್ರಜಾಪ್ರಭುತ್ವದ ಆಡಳಿತ ಇರುವ ದೇಶ. ನಮಗೀಗ ಆಂತರಿಕವಾಗಿ ಯಾರ ಮೇಲೂ ಗುದ್ದಾಟ ನಡೆಸಬೇಕಾದ ಅಗತ್ಯ ಇಲ್ಲ. ಬೇರೆ ದೇಶಗಳೊಂದಿಗೆ ಯುದ್ಧದಂತಹ ಸಂದರ್ಭ<br />ಗಳನ್ನು ಎದುರಿಸಲು ಸೈನ್ಯ ಇದೆ. ಆಂತರಿಕ ಸಮಸ್ಯೆಗಳನ್ನು ನಿಭಾಯಿಸಲು ಪೊಲೀಸರಿದ್ದಾರೆ.</p>.<p>ಜನರು ತಮ್ಮ ನಿತ್ಯ ಬದುಕಿಗೆ ಸಹಕಾರಿ ಆಗುವ ಕಸುಬಿಗೆ ಸಂಬಂಧಿಸಿದ ಆಯುಧಗಳನ್ನು ಈ ಹಬ್ಬದಲ್ಲಿ ಪೂಜಿಸಿ ಖುಷಿಪಡುತ್ತಾರೆ. ಹೋರಾಟಕ್ಕೆ, ಹೊಡೆದಾಟಕ್ಕೆ ಬಳಸುವ ಅಸ್ತ್ರಗಳನ್ನೂ ಪೂಜಿಸಿ ಬಳಸಿ ಎಂದು ಸಂಘ ಸಂಸ್ಥೆಗಳ ಮುಖ್ಯಸ್ಥರು ಕರೆ ಕೊಡುವುದು ಸರಿಯಲ್ಲ. ಸಹಬಾಳ್ವೆಯ ಜೀವನ ಮಾಡಬೇಕಾದ ಸಮಾಜದಲ್ಲಿ ಇಂತಹ ಬೆಂಕಿ ಹಚ್ಚುವ ಮಾತನಾಡಿ, ಯುವಕರ ಕಣ್ಣು ಕೆಂಪಾಗಿಸುವುದು ಯಾವ ನ್ಯಾಯ? ಎಲ್ಲ ಧರ್ಮೀಯರೂ ಹೀಗೆಯೇ ಕರೆ ಕೊಟ್ಟು ಪ್ರಚೋದಿಸಿದರೆ, ಸಮಾಜದ ಪರಿಸ್ಥಿತಿ ಏನಾಗಬಹುದು?</p>.<p>→→ತಾ.ಸಿ.ತಿಮ್ಮಯ್ಯ,ಬೆಂಗಳೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಹಿಂದೂಗಳು ಶಸ್ತ್ರಗಳನ್ನು ಪೂಜಿಸಿದರೆ ಸಾಲದು, ಬಳಸುವುದನ್ನೂ ಕಲಿಯಬೇಕು’ ಎಂದು ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಸಹಕಾರ್ಯ ದರ್ಶಿ ಹಾಗೂ ಅಯೋಧ್ಯೆಯ ರಾಮಮಂದಿರ ನವನಿರ್ಮಾಣದ<br />ಉಸ್ತುವಾರಿಯಲ್ಲಿ ಒಬ್ಬರಾದ ಗೋಪಾಲ್ ನಾಗರಕಟ್ಟೆ ಹೇಳಿದ್ದಾರೆ.</p>.<p>(ಪ್ರ.ವಾ., ಅ. 6). ನಮ್ಮದು ಪ್ರಜಾಪ್ರಭುತ್ವದ ಆಡಳಿತ ಇರುವ ದೇಶ. ನಮಗೀಗ ಆಂತರಿಕವಾಗಿ ಯಾರ ಮೇಲೂ ಗುದ್ದಾಟ ನಡೆಸಬೇಕಾದ ಅಗತ್ಯ ಇಲ್ಲ. ಬೇರೆ ದೇಶಗಳೊಂದಿಗೆ ಯುದ್ಧದಂತಹ ಸಂದರ್ಭ<br />ಗಳನ್ನು ಎದುರಿಸಲು ಸೈನ್ಯ ಇದೆ. ಆಂತರಿಕ ಸಮಸ್ಯೆಗಳನ್ನು ನಿಭಾಯಿಸಲು ಪೊಲೀಸರಿದ್ದಾರೆ.</p>.<p>ಜನರು ತಮ್ಮ ನಿತ್ಯ ಬದುಕಿಗೆ ಸಹಕಾರಿ ಆಗುವ ಕಸುಬಿಗೆ ಸಂಬಂಧಿಸಿದ ಆಯುಧಗಳನ್ನು ಈ ಹಬ್ಬದಲ್ಲಿ ಪೂಜಿಸಿ ಖುಷಿಪಡುತ್ತಾರೆ. ಹೋರಾಟಕ್ಕೆ, ಹೊಡೆದಾಟಕ್ಕೆ ಬಳಸುವ ಅಸ್ತ್ರಗಳನ್ನೂ ಪೂಜಿಸಿ ಬಳಸಿ ಎಂದು ಸಂಘ ಸಂಸ್ಥೆಗಳ ಮುಖ್ಯಸ್ಥರು ಕರೆ ಕೊಡುವುದು ಸರಿಯಲ್ಲ. ಸಹಬಾಳ್ವೆಯ ಜೀವನ ಮಾಡಬೇಕಾದ ಸಮಾಜದಲ್ಲಿ ಇಂತಹ ಬೆಂಕಿ ಹಚ್ಚುವ ಮಾತನಾಡಿ, ಯುವಕರ ಕಣ್ಣು ಕೆಂಪಾಗಿಸುವುದು ಯಾವ ನ್ಯಾಯ? ಎಲ್ಲ ಧರ್ಮೀಯರೂ ಹೀಗೆಯೇ ಕರೆ ಕೊಟ್ಟು ಪ್ರಚೋದಿಸಿದರೆ, ಸಮಾಜದ ಪರಿಸ್ಥಿತಿ ಏನಾಗಬಹುದು?</p>.<p>→→ತಾ.ಸಿ.ತಿಮ್ಮಯ್ಯ,ಬೆಂಗಳೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>