ಹತ್ತು ವರ್ಷ ಕನ್ನಡ ಕಲಿತು ಪಿಯುಸಿಗೆ ಬರುವ ವಿದ್ಯಾರ್ಥಿಗಳಿಗೆ ವರ್ಣಮಾಲೆ ಗೊತ್ತಿರುವುದಿಲ್ಲ. ಅತ್ತಿಗೆ ಎಂದು ಯಾರನ್ನು ಕರೆಯಬೇಕು, ಅತ್ತೆ-ಮಾವ ಅಂದರೆ ಯಾರು ಎನ್ನುವುದೂ ಕೆಲವರಿಗೆ ಗೊತ್ತಿರುವುದಿಲ್ಲ. ಇಂತಹ ಸ್ಥಿತಿಗೆ ಕಾರಣ ಯಾರು ಎಂದು ಯೋಚನೆ ಮಾಡಬೇಕು. ಶಾಲಾ ಹಂತದಲ್ಲಿ ಕಟ್ಟುನಿಟ್ಟಿನ ಶಿಕ್ಷಣ ಆಗಬೇಕು. ಬುಡದಿಂದಲೇ ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ಮುಂದಿನ ತರಗತಿಗೆ ‘ದಬ್ಬು ಸಂಸ್ಕೃತಿ’ಯನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ವಿದ್ಯಾವಂತ ಪ್ರಜೆಗಳು ತಯಾರಾಗುವುದಿಲ್ಲ, ಬದಲಾಗಿ ಕೇವಲ ಪದವೀಧರ ಪ್ರಜೆಗಳು ತಯಾರಾಗುತ್ತಾರೆ.