‘ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಬದ್ಧತೆ ತೋರಿ’ ಎಂದಿದ್ದಾರೆ ಈ. ಬಸವರಾಜು (ವಾ.ವಾ., ಡಿ.18). ಸರಿ, ಆದರೆ ಬೆಂಗಳೂರು, ಮೈಸೂರು, ಧಾರವಾಡ, ಕಲಬುರ್ಗಿಯಂಥ ನಗರಗಳಿಂದ ಹಿಡಿದು, ಹಳ್ಳಿಗಳ ಮೂಲೆ ಮೂಲೆಯವರೆಗೂ ಖಾಸಗಿ ಶಾಲೆಗಳ ಹಳದಿ ಬಸ್ಗಳು ಓಡಾಡುತ್ತಿವೆ. ಇದರಿಂದಾಗಿ ಕನ್ನಡ ಮಾತೃಭಾಷಾ ಶಿಕ್ಷಣದ ಪರ ಹೋರಾಟಗಾರರು ಕೂಡ ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಸೇರಿಸುವ ಅನಿವಾರ್ಯ ಉಂಟಾಗಿದೆ.