ಕನಿಷ್ಠ ಬೆಂಬಲ ಬೆಲೆ ಒಳಗೊಂಡು ಆಗಲೇ ಇರುವ ಎಪಿಎಂಸಿ ವ್ಯವಸ್ಥೆಯ ಕುಂದುಕೊರತೆಗಳನ್ನು ತಿದ್ದುವ ಕಡೆ ಯೋಚಿಸಬಹುದಾಗಿತ್ತು. ತನ್ಮೂಲಕ ರೈತರ ವಿಶ್ವಾಸಾರ್ಹತೆ ತಿಲಮಾತ್ರದಷ್ಟಾದರೂ ದಕ್ಕುತ್ತಿತ್ತೇನೊ. ಕುತ್ತಿಗೆಗೆ ಬಂದಿದ್ದ ಕಂಟಕವನ್ನು ಸದ್ಯಕ್ಕೆ ನಿವಾರಿಸಿಕೊಂಡ ರೈತ ಮಾತ್ರ ಇನ್ನೂ ಇದ್ದಲ್ಲೇ ಇದ್ದಾನೆ. ‘ಕಾಯ್ದೆ ಒಳ್ಳೆಯವು, ಅರ್ಥೈಸಲು ಅಸಮರ್ಥರಾದೆವು’ ಎಂದೆನ್ನುವ ಸರ್ಕಾರಕ್ಕೆ, ಈ ಸಮರ್ಥನೆ ರೈತರ ಕಿರುನೆಮ್ಮದಿಯನ್ನೇ ಸಣ್ಣಗೆ ಅಲುಗಿಸುತ್ತದೆ ಎಂಬ ಅರಿವು ಬಾರದ್ದು ವಿಷಾದಕರ.⇒ರಾಮಚಂದ್ರ ಎಸ್. ಕುಲಕರ್ಣಿ,ಧಾರವಾಡ