ವಿಜಯಪುರದ ಅಂಚೆ ಕಚೇರಿ ಮುಂಭಾಗದಲ್ಲಿರುವ ಅಂಚೆ ಪೆಟ್ಟಿಗೆ ತುಂಬ ಹಳೆಯದಾಗಿದ್ದು, ಕಿತ್ತುಹೋಗಿದೆ. ಮಳೆ ಬಂದರೆ ಮಳೆ ನೀರು ಪೆಟ್ಟಿಗೆಯೊಳಗೆ ಹೋಗಿ ಪತ್ರಗಳು ಹಾಳಾಗುವುದರಲ್ಲಿ ಸಂಶಯವೇ ಇಲ್ಲ, ಇನ್ನೇನು ಮಳೆಗಾಲ ಪ್ರಾರಂಭವಾಗಲಿದೆ. ಆದ್ದರಿಂದ ಸಂಬಂಧಪಟ್ಟವರು ಇತ್ತ ಗಮನಹರಿಸಿ ಶೀಘ್ರವೇ ಈ ಪೆಟ್ಟಿಗೆಯನ್ನು ಬದಲಾಯಿಸಿ ಹೊಸ ಪೆಟ್ಟಿಗೆ ಇರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಕೋರುತ್ತೇವೆ.