ಲೋಕೋಪಯೋಗಿ ಸಚಿವ ಎಚ್. ಸಿ. ಮಹದೇವಪ್ಪ ಅವರು ಸರ್ಕಾರಿ ನಿವಾಸದ ದೊಡ್ಡಮಟ್ಟದ ದುರಸ್ತಿಗೆ ಮುಕ್ಕಾಲು ಕೋಟಿ ರೂಪಾಯಿ ಹಣ ವೆಚ್ಚ ಮಾಡಲು ಮುಂದಾಗಿದ್ದಾರೆ. ಇದನ್ನು ಸಮರ್ಥಿಸಿದ ಅವರು ಸರ್ಕಾರಿ ಆಸ್ತಿ ರಕ್ಷಿಸುವುದು ತಮ್ಮ ಕರ್ತವ್ಯ ಎಂದು ಹೇಳಿಕೊಂಡಿದ್ದಾರೆ.
ಆದರೆ ಅದೇ ಮನೆಯಲ್ಲಿ ಕಾರ್ಟೂನ್ ಚಿತ್ರಗಳನ್ನು ಅಂಟಿಸಿಕೊಂಡಿದ್ದಾರೆ. ಅವರಿಗೆ ಸರ್ಕಾರಿ ಆಸ್ತಿಗಿಂತ ತಮ್ಮ ಮೊಮ್ಮಕ್ಕಳ ಸಂತೋಷ, ಇಷ್ಟ, ಕಾಳಜಿಯೇ ದೊಡ್ಡದಾಯಿತೇ? ಅವರು ಈ ರೀತಿ ಮಾಡಿ ಸರ್ಕಾರಿ ನಿವಾಸದ ಉಪಯೋಗಕ್ಕಿಂತ ದುರುಪಯೋಗ ಮಾಡಿಕೊಂಡಿದ್ದಾರೆ. ಸಚಿವರ ಈ ಕಾರ್ಯಗಳಿಗೆ ಕಡಿವಾಣ ಬೀಳಲಿ.