ಆದರೂ ಇವುಗಳ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಿರುವ ಉದಾಹರಣೆಗಳು ಕಡಿಮೆ. ಈಗಲಾದರೂ ಬಿ.ಬಿ.ಎಂ.ಪಿ. ಮತ್ತು ಅರಣ್ಯ ಇಲಾಖೆ ಅಪಾಯದ ಅಂಚಿನಲ್ಲಿರುವ ಮರಗಳು ಮತ್ತು ಒಣಗಿರುವ ಮರದ ಕೊಂಬೆಗಳ ಬಗ್ಗೆ ಗಮನ ಹರಿಸಿ ಅವುಗಳನ್ನು ಕತ್ತರಿಸಿ ಹಾಕಿ ಜೀವ ಹಾನಿಯಾಗಿ ಪರಿಹಾರ ಕೊಡುವಂತಹ ಘಟನೆಗಳು ಸಂಭವಿಸದ ಹಾಗೆ ಎಚ್ಚರ ವಹಿಸಬೇಕಿದೆ.
- ಕೆ.ಎಸ್. ನಾಗರಾಜ್