ಸಂಸತ್ ಕಲಾಪದ ಗುಣಮಟ್ಟ ದಿನೇ ದಿನೇ ಕುಸಿಯುತ್ತಿರುವುದು ನೋವಿನ ಸಂಗತಿ. ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ತೋರುತ್ತಿರುವ ಒಣಪ್ರತಿಷ್ಠೆ, ತಮ್ಮನ್ನು ಆರಿಸಿ ಕಳಿಸಿದ ಮತದಾರನಿಗೆ ಮಾಡುತ್ತಿರುವ ಅವಮಾನದಂತೆ ಭಾಸವಾಗುತ್ತದೆ. ತಮ್ಮನ್ನು ಪ್ರತಿನಿಧಿಸುತ್ತಿರುವ ನಾಯಕರು ಹಾಗೂ ಪಕ್ಷಗಳ ವರಸೆಯನ್ನು ಮತದಾರ ಸೂಕ್ಷ್ಮವಾಗಿ ಗಮನಿಸ ಬೇಕು. ತಕ್ಕ ಪಾಠ ಕಲಿಸಬೇಕು.