‘ಸಂಕೇತಿಗಳ ಯಾಗದಲ್ಲಿ ಮೇಕೆಗಳ ಆಹುತಿ’ (ಪ್ರ.ವಾ., ಮೇ 4).
‘ಮಾತಿನ ಮಾತಿಂಗೆ ನಿನ್ನ ಕೊಂದಿಹರೆಂದು ಎಲೆ ಹೋತೇ, ಅಳು ಕಂಡಾ! ವೇದವನೋದಿದವರ ಮುಂದೆ ಅಳು ಕಂಡಾ!’ ಎಂದ ನಿನ್ನ ಮಾತು ಇಂದಿಗೂ ಪ್ರಸ್ತುತವಲ್ಲವೆ? ಕಂಡಾ, ಬಸವಣ್ಣ! ಅಳಬೇಕಾದ್ದು ಹೋತವಲ್ಲ, ಮೇಕೆಯಲ್ಲ, ನೀನು ಕಂಡಾ, ಬಸವಣ್ಣ!
‘ನೀನತ್ತುದಕ್ಕೆ ತಕ್ಕುದ ಮಾಡುವ ಕೂಡಲ ಸಂಗಮದೇವ’ ಎಂದೂ ನೀನು ಎಚ್ಚರಿಸಿದೆ. ಆದರೆ, ವೇದಶಾಸ್ತ್ರ ಪಾರಂಗತರ ಮುಂದೆ, ಪಾಪ, ಅವನೂ ಅಸಹಾಯಕನಲ್ಲವೆ? (ನಿನ್ನ ಜಯಂತಿ ಬರುತ್ತದೆ, ಹೋಗುತ್ತದೆ!)