ಎಸ್.ಎಲ್. ಭೈರಪ್ಪ ಹಾಗೂ ಯು.ಆರ್. ಅನಂತಮೂರ್ತಿ ಇವರಿಬ್ಬರೂ ಧಾರವಾಡದ ‘ಸಾಹಿತ್ಯ ಸಂಭ್ರಮ’ದಲ್ಲಿ ಪರಸ್ಪರ ಕೈಕುಲುಕುತ್ತಿರುವ ಚಿತ್ರ (ಪ್ರ.ವಾ. ಜ. 19) ಒಂದು ಹಿತವಾದ ಭಾವನೆ ಉಂಟುಮಾಡಿತು. ಇನ್ನೊಬ್ಬರ ಅನುಪಸ್ಥಿತಿಯಲ್ಲಿ ವೇದಿಕೆಯಲ್ಲೇ ವಾಗ್ಯುದ್ಧ ಮಾಡುವ ಮತ್ತು ಪತ್ರಿಕೆಯ ಮೂಲಕವೂ ಟೀಕೆ–ಟಿಪ್ಪಣಿಗಳ ಬಾಣಬಿಡುವ ಇವರು ಕನ್ನಡಕ್ಕಾಗಿ ಕೈಜೋಡಿಸಿದರೆ ಅದೆಂತಹ ಬಲ ಬಂದೀತು!
ಭಾರತೀಯ ತತ್ವಶಾಸ್ತ್ರವನ್ನು ಅರೆದು ಕುಡಿದಿರುವ ಭೈರಪ್ಪ, ಪಾಶ್ಚಾತ್ಯ ಶೈಲಿಯಂತೆ ಪ್ಯಾಂಟ್ ಧರಿಸಿ, ಷರಟನ್ನು ಇನ್ ಮಾಡಿ ಬೆಲ್ಟ್ ಹಾಕಿದ್ದಾರೆ. ಆದರೆ ಪಾಶ್ಚಾತ್ಯ ಚಿಂತನೆಯನ್ನು ಅಳವಡಿಸಿಕೊಂಡಿರುವ ಅನಂತಮೂರ್ತಿ ಅಪ್ಪಟ ಭಾರತೀಯ ಉಡುಪಿನಲ್ಲಿದ್ದಾರೆ. ಇದು ಎಂತಹ ಸೋಜಿಗ ಅಲ್ಲವೆ?