ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕ್ಕಾಗಿ ಕೈಜೋಡಿಸಲಿ

Last Updated 27 ಜನವರಿ 2014, 19:30 IST
ಅಕ್ಷರ ಗಾತ್ರ

ಎಸ್‌.ಎಲ್‌. ಭೈರಪ್ಪ ಹಾಗೂ  ಯು.ಆರ್. ಅನಂತಮೂರ್ತಿ ಇವರಿಬ್ಬರೂ ಧಾರವಾಡದ ‘ಸಾಹಿತ್ಯ ಸಂಭ್ರಮ’ದಲ್ಲಿ ಪರಸ್ಪರ ಕೈಕುಲು­ಕುತ್ತಿ­ರುವ ಚಿತ್ರ (ಪ್ರ.ವಾ. ಜ. 19) ಒಂದು ಹಿತವಾದ ಭಾವನೆ­ ಉಂಟುಮಾಡಿತು. ಇನ್ನೊಬ್ಬರ ಅನುಪ­ಸ್ಥಿತಿ­ಯಲ್ಲಿ ವೇದಿಕೆಯಲ್ಲೇ ವಾಗ್ಯುದ್ಧ ಮಾಡುವ ಮತ್ತು ಪತ್ರಿಕೆಯ ಮೂಲಕವೂ ಟೀಕೆ–ಟಿಪ್ಪಣಿಗಳ ಬಾಣ­­ಬಿಡುವ ಇವರು ಕನ್ನ­ಡ­ಕ್ಕಾಗಿ ಕೈ­ಜೋಡಿ­ಸಿದರೆ ಅದೆಂತಹ ಬಲ ಬಂದೀತು!

ಭಾರತೀಯ ತತ್ವ­ಶಾಸ್ತ್ರ­ವನ್ನು ಅರೆದು ಕುಡಿ­ದಿ­ರುವ ಭೈರಪ್ಪ, ಪಾಶ್ಚಾತ್ಯ ಶೈಲಿಯಂತೆ ಪ್ಯಾಂಟ್‌ ಧರಿಸಿ, ಷರಟನ್ನು ಇನ್‌ ಮಾಡಿ ಬೆಲ್ಟ್ ಹಾಕಿ­ದ್ದಾರೆ. ಆದರೆ ಪಾಶ್ಚಾತ್ಯ ಚಿಂತನೆಯನ್ನು ಅಳ­ವಡಿ­ಸಿ­ಕೊಂಡಿರುವ ಅನಂತಮೂರ್ತಿ ಅಪ್ಪಟ ಭಾರ­ತೀಯ ಉಡುಪಿನಲ್ಲಿದ್ದಾರೆ. ಇದು ಎಂತಹ ಸೋಜಿಗ ಅಲ್ಲವೆ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT