<p>‘ಕೊರೊನಾ ವೈರಾಣುಗಿಂತ ಪೆನ್ಡ್ರೈವ್ ಹೈರಾಣ ಅಪಾಯಕಾರಿಯೇನ್ರೀ?’ ಟಿ.ವಿ. ನ್ಯೂಸ್ ಆಫ್ ಮಾಡಿ ಸುಮಿ ಕೇಳಿದಳು.</p>.<p>‘ಎರಡೂ ಡೇಂಜರ್ರೇ, ಒಂದು ಪ್ರಾಣಹಾನಿ, ಇನ್ನೊಂದು ಮಾನಹಾನಿ... ಆದರೆ ಸಾಮಾಜಿಕ ರಗಳೆಯಾದ ಪೆನ್ಡ್ರೈವ್ ಕೇಸ್ ಸಾಂಕ್ರಾಮಿಕ ರೋಗಕ್ಕಿಂತ ಅಪಾಯಕಾರಿಯಾಗಿ ಹರಡುತ್ತಾ ರಾಷ್ಟ್ರೀಯ ಸಮಸ್ಯೆ ಆಗಿಬಿಟ್ಟಿದೆಯಂತೆ. ಪೆನ್ಡ್ರೈವ್ ಪ್ರಾಬ್ಲಂ ತಡೆಗೆ ಸರ್ಕಾರ ಹೆಣಗಾಡುತ್ತಿದೆಯಂತೆ’ ಅಂದ ಶಂಕ್ರಿ.</p>.<p>‘ರಾಜಕಾರಣಿಗಳು, ಮೀಡಿಯಾ ದಿನಬೆಳಗಾದರೆ ಪೆನ್ಡ್ರೈವ್ ಪಾರಾಯಣ ಮಾಡುತ್ತಿದ್ದರೆ ಈ ರಗಳೆ ನಿಯಂತ್ರಣಕ್ಕೆ ಬಾರದೆ ಮತ್ತಷ್ಟು ಉಲ್ಬಣ ಆಗೋದಿಲ್ವೇನ್ರೀ? ಇವರೆಲ್ಲಾ ಪೆನ್ಡ್ರೈವ್ ಹಿಡಿದು ಹೀಗೇ ಲಾಂಗ್ ಡ್ರೈವ್ ಹೊರಟರೆ... ಈ ಪ್ರಕರಣದ ತರಹೇವಾರಿ ಪುಕಾರು ರಾಷ್ಟ್ರದ ಗಡಿ ದಾಟಿ ಜಾಗತಿಕ ಮಟ್ಟಕ್ಕೂ ಹರಡಿದರೆ ಮರ್ಯಾದೆ ಇರುತ್ತೇನ್ರೀ?’</p>.<p>‘ಪೆನ್ಡ್ರೈವ್ ಕೇಸ್ನಿಂದ ರಾಜ್ಯದ ಜನ ತಲೆ ತಗ್ಗಿಸುವಂತಾಗಿದೆ. ಪ್ರಕರಣವನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿಲ್ಲ ಎಂದು ವಿಪಕ್ಷದವರು ದಬಾಯಿಸುತ್ತಿದ್ದಾರೆ. ಗಂಭೀರವಾಗಿ ಪರಿಗಣಿಸಿದ್ದೇವೆ, ಪೆನ್ಡ್ರೈವ್ ಪೀಡೆಯನ್ನು ಬುಡಸಮೇತ ನಿರ್ಮೂಲನೆ ಮಾಡುತ್ತೇವೆ ಎಂದು ಆಡಳಿತ ಪಕ್ಷದವರು ಹೇಳುತ್ತಿದ್ದಾರೆ’.</p>.<p>‘ಈ ಪೆನ್ಡ್ರೈವ್ ಪ್ರಕರಣವನ್ನು ಆಡಳಿತ, ವಿರೋಧ ಪಕ್ಷಗಳವರು ರಾಜಕೀಯ ಅಸ್ತ್ರ ಮಾಡಿಕೊಂಡು ಪ್ರಯೋಗಿಸುತ್ತಿರುವುದನ್ನು<br>ನೋಡಿದರೆ ಈ ಪ್ರಕರಣ ಬಹು ದೊಡ್ಡ ಸಾರ್ವಜನಿಕ ಸಮಸ್ಯೆಯೇ ಆಗಿರಬಹುದು!’</p>.<p>‘ಇರಬಹುದೇನೋ, ಪೆನ್ಡ್ರೈವ್ ಪ್ರಕರಣದಿಂದಲೇ ರಾಜ್ಯದಲ್ಲಿ ಬರಗಾಲ ಬಂದು ಕುಡಿಯುವ ನೀರಿಗೂ ಸಮಸ್ಯೆಯಾಗಿರಬಹುದು. ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ಪೆನ್ಡ್ರೈವ್ ದುಷ್ಪರಿಣಾಮ ಬೀರಿರಬಹುದು. ಕಾನೂನು ಸುವ್ಯವಸ್ಥೆ ಹಾಳಾಗಿರಬಹುದು, ಪದಾರ್ಥಗಳ ಬೆಲೆ ಏರಿಕೆಗೂ ಪೆನ್ಡ್ರೈವ್ ಕಾರಣವಾಗಿರಬಹುದು’.</p>.<p>‘ಹೌದೌದು. ಈಗಿನ ನಗೆಪಾಟಲಿನ ಪರಿಸ್ಥಿತಿಗೆ ಪೆನ್ಡ್ರೈವೇ ಕಾರಣವಾಗಿದೆ. ಪೆನ್ಡ್ರೈವ್ ಓಟಕ್ಕೆ ಬ್ರೇಕ್ ಬೀಳುವವರೆಗೂ ನಾವು <br>ತೆಪ್ಪಗಿರಬೇಕಷ್ಟೇ...’ ಎಂದ ಶಂಕ್ರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಕೊರೊನಾ ವೈರಾಣುಗಿಂತ ಪೆನ್ಡ್ರೈವ್ ಹೈರಾಣ ಅಪಾಯಕಾರಿಯೇನ್ರೀ?’ ಟಿ.ವಿ. ನ್ಯೂಸ್ ಆಫ್ ಮಾಡಿ ಸುಮಿ ಕೇಳಿದಳು.</p>.<p>‘ಎರಡೂ ಡೇಂಜರ್ರೇ, ಒಂದು ಪ್ರಾಣಹಾನಿ, ಇನ್ನೊಂದು ಮಾನಹಾನಿ... ಆದರೆ ಸಾಮಾಜಿಕ ರಗಳೆಯಾದ ಪೆನ್ಡ್ರೈವ್ ಕೇಸ್ ಸಾಂಕ್ರಾಮಿಕ ರೋಗಕ್ಕಿಂತ ಅಪಾಯಕಾರಿಯಾಗಿ ಹರಡುತ್ತಾ ರಾಷ್ಟ್ರೀಯ ಸಮಸ್ಯೆ ಆಗಿಬಿಟ್ಟಿದೆಯಂತೆ. ಪೆನ್ಡ್ರೈವ್ ಪ್ರಾಬ್ಲಂ ತಡೆಗೆ ಸರ್ಕಾರ ಹೆಣಗಾಡುತ್ತಿದೆಯಂತೆ’ ಅಂದ ಶಂಕ್ರಿ.</p>.<p>‘ರಾಜಕಾರಣಿಗಳು, ಮೀಡಿಯಾ ದಿನಬೆಳಗಾದರೆ ಪೆನ್ಡ್ರೈವ್ ಪಾರಾಯಣ ಮಾಡುತ್ತಿದ್ದರೆ ಈ ರಗಳೆ ನಿಯಂತ್ರಣಕ್ಕೆ ಬಾರದೆ ಮತ್ತಷ್ಟು ಉಲ್ಬಣ ಆಗೋದಿಲ್ವೇನ್ರೀ? ಇವರೆಲ್ಲಾ ಪೆನ್ಡ್ರೈವ್ ಹಿಡಿದು ಹೀಗೇ ಲಾಂಗ್ ಡ್ರೈವ್ ಹೊರಟರೆ... ಈ ಪ್ರಕರಣದ ತರಹೇವಾರಿ ಪುಕಾರು ರಾಷ್ಟ್ರದ ಗಡಿ ದಾಟಿ ಜಾಗತಿಕ ಮಟ್ಟಕ್ಕೂ ಹರಡಿದರೆ ಮರ್ಯಾದೆ ಇರುತ್ತೇನ್ರೀ?’</p>.<p>‘ಪೆನ್ಡ್ರೈವ್ ಕೇಸ್ನಿಂದ ರಾಜ್ಯದ ಜನ ತಲೆ ತಗ್ಗಿಸುವಂತಾಗಿದೆ. ಪ್ರಕರಣವನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿಲ್ಲ ಎಂದು ವಿಪಕ್ಷದವರು ದಬಾಯಿಸುತ್ತಿದ್ದಾರೆ. ಗಂಭೀರವಾಗಿ ಪರಿಗಣಿಸಿದ್ದೇವೆ, ಪೆನ್ಡ್ರೈವ್ ಪೀಡೆಯನ್ನು ಬುಡಸಮೇತ ನಿರ್ಮೂಲನೆ ಮಾಡುತ್ತೇವೆ ಎಂದು ಆಡಳಿತ ಪಕ್ಷದವರು ಹೇಳುತ್ತಿದ್ದಾರೆ’.</p>.<p>‘ಈ ಪೆನ್ಡ್ರೈವ್ ಪ್ರಕರಣವನ್ನು ಆಡಳಿತ, ವಿರೋಧ ಪಕ್ಷಗಳವರು ರಾಜಕೀಯ ಅಸ್ತ್ರ ಮಾಡಿಕೊಂಡು ಪ್ರಯೋಗಿಸುತ್ತಿರುವುದನ್ನು<br>ನೋಡಿದರೆ ಈ ಪ್ರಕರಣ ಬಹು ದೊಡ್ಡ ಸಾರ್ವಜನಿಕ ಸಮಸ್ಯೆಯೇ ಆಗಿರಬಹುದು!’</p>.<p>‘ಇರಬಹುದೇನೋ, ಪೆನ್ಡ್ರೈವ್ ಪ್ರಕರಣದಿಂದಲೇ ರಾಜ್ಯದಲ್ಲಿ ಬರಗಾಲ ಬಂದು ಕುಡಿಯುವ ನೀರಿಗೂ ಸಮಸ್ಯೆಯಾಗಿರಬಹುದು. ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ಪೆನ್ಡ್ರೈವ್ ದುಷ್ಪರಿಣಾಮ ಬೀರಿರಬಹುದು. ಕಾನೂನು ಸುವ್ಯವಸ್ಥೆ ಹಾಳಾಗಿರಬಹುದು, ಪದಾರ್ಥಗಳ ಬೆಲೆ ಏರಿಕೆಗೂ ಪೆನ್ಡ್ರೈವ್ ಕಾರಣವಾಗಿರಬಹುದು’.</p>.<p>‘ಹೌದೌದು. ಈಗಿನ ನಗೆಪಾಟಲಿನ ಪರಿಸ್ಥಿತಿಗೆ ಪೆನ್ಡ್ರೈವೇ ಕಾರಣವಾಗಿದೆ. ಪೆನ್ಡ್ರೈವ್ ಓಟಕ್ಕೆ ಬ್ರೇಕ್ ಬೀಳುವವರೆಗೂ ನಾವು <br>ತೆಪ್ಪಗಿರಬೇಕಷ್ಟೇ...’ ಎಂದ ಶಂಕ್ರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>