ಡಿ.ವಿ.ಜಿ. ರಸ್ತೆಯಿಂದ ಗಾಂಧಿಬಜಾರ್ ವೃತ್ತದವರೆಗೆ ರಸ್ತೆಯ ಪಾದಚಾರಿಗಳ ಮಾರ್ಗದಲ್ಲಿ ಎರಡೂ ಬದಿಗೆ ಕಲ್ಲು ಚಪ್ಪಡಿಗಳನ್ನು ಹಾಸಲಾಗಿದೆ.
ಈ ಕಲ್ಲು ಚಪ್ಪಡಿ ಮೇಲೆ ನಡೆದಾಡುವುದೇ ಸಾಹಸ! ತೂಕದ ವ್ಯಕ್ತಿಯಾದರೆ ಅವರ ಭಾರಕ್ಕೆ ಸೀದಾ ಮೋರಿಯಲ್ಲಿ ಬೀಳುವುದು ಗ್ಯಾರಂಟಿ. ಈ ಪಾದಚಾರಿ ಮಾರ್ಗದಲ್ಲಿ ನಡೆದಾಡಿದರೆ ಧಡ್ ಧಡ್ ಎಂಬ ಶಬ್ದ, ಯಾವಾಗ ಮುರಿದು ಬೀಳುತ್ತದೋ ಎಂಬ ಭಯ. ಹೀಗಾಗಿ ಪಾದಚಾರಿಗಳು ಪಾದಚಾರಿ ಮಾರ್ಗ ಬಿಟ್ಟು ರಸ್ತೆಯಲ್ಲೇ ಓಡಾಡುವಂತಾಗಿದೆ. ಬಸವನಗುಡಿ ಶಾಸಕರು ಈ ಬಗ್ಗೆ ಗಮನಹರಿಸುವರೇ?