<p><span style="font-size:36px;">ರೂ</span>ಪಾಯಿಗೆ ಕೆ.ಜಿ. ಅಕ್ಕಿಯಂತೆ ಬಡವರಿಗೆ ತಿಂಗಳಿಗೆ 30 ಕೆ.ಜಿ. ಅಕ್ಕಿ ಕೊಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಈ ತಿಂಗಳ 4ರ ಸಂಚಿಕೆಯಲ್ಲಿ ಸವಿತಾ ನಾಗಭೂಷಣ ಸಮರ್ಥಿಸಿದ್ದಾರೆ. ನಾನು ಪದವೀಧರ ಆಗಿ ನೌಕರಿ ಬಿಟ್ಟು ಊರು ಸೇರಿ ಕೃಷಿಯಲ್ಲಿ ತೊಡಗಿದೆ.<br /> <br /> ಕೃಷಿಗೆ ದುಡ್ಡು ಮಾತ್ರ ಇದ್ದರಾಗದು, ಜನ ಬೇಕು. ಪ್ರಾರಂಭದಲ್ಲಿ (1970-80ರ ದಶಕ) ಕಾರ್ಮಿಕರು ಸಿಗುತ್ತಿದ್ದರು, ಕೆಲಸ ಚೆನ್ನಾಗಿ ಆಗುತ್ತಿತ್ತು, ಕಾರ್ಮಿಕರಿಗೆ ಮುಂಗಡವನ್ನೂ ಕೊಡುತ್ತಿದ್ದೆವು, ಕಷ್ಟಕ್ಕೆ ಒತ್ತಾಸೆಯಾಗಿರುತ್ತಿದ್ದೆವು. ಆರ್ಥಿಕ ದೃಷ್ಟಿಯಿಂದ ಉತ್ಪಾದನೆ ಹೆಚ್ಚಾಗಿರುತ್ತಿತ್ತು, ಬೆಲೆ ಏರಿಕೆಗೆ ತಡೆ ಇತ್ತು. ಕ್ರಮೇಣ 2000ದ ಹೊತ್ತಿಗೆ ನಗರಕ್ಕೆ ವಲಸೆ ಹೆಚ್ಚಾಯಿತು.</p>.<p>ನಗರದಲ್ಲಿ ಬಿ.ಪಿ.ಎಲ್. ಕಾರ್ಡುಗಳು ಲಭ್ಯವಾದುವು, ಹಳ್ಳಿಗಳಲ್ಲಿ ಉಳಿದಿದ್ದವರು ಬಿ.ಪಿ.ಎಲ್. ಪಡೆದುಕೊಂಡರು. ಅಕ್ಕಿ ಕೆ.ಜಿ.ಗೆ 3 ರೂ ಆಯಿತು. ಓಟಿನ ದೃಷ್ಟಿಯಿಂದ ಒಂದು ರೂ ಆಗಿದೆ. ನಾಳೆ ಬಿಟ್ಟಿ ಕೊಡುವುದೂ ಆಗುತ್ತೇನೋ. ಈಗ ನಮ್ಮ 8 ಎಕರೆ, ತೆಕ್ಕಲು, ಬದುಕು ಸಾಮಾನ್ಯ ಮಧ್ಯಮ ಮಟ್ಟದ್ದಾಯಿತು. ಎರಡು ಎಕರೆಗೆ ಕೃಷಿ ಸೀಮಿತವಾಯಿತು.</p>.<p>ಊರಿನಲ್ಲಿದ್ದ ಸಣ್ಣ ರೈತರು, ಕಾರ್ಮಿಕರು ಬಿಪಿಎಲ್ ಪಡೆದರು. ಕುಡಿತ ಹೆಚ್ಚಾಯಿತು. ಒಬ್ಬ ರೈತ ಈ ಸಲ 1 ಎಕರೆಗೆ 6 ಟನ್ ಕಬ್ಬು ಬೆಳೆದಿದ್ದಾನೆ! ಒಂದು ರೂಪಾಯಿಗೆ ಕೆ.ಜಿ. ಅಕ್ಕಿ, ಗೋಧಿ (?) ಕೊಟ್ಟರೆ ದುಡಿಯುವ ಅನಿವಾರ್ಯತೆ ಎಲ್ಲಿದೆ. ಏನೋ ಪುಡಿ ಕೆಲಸ ಮಾಡಿ ಬೇಳೆ, ಎಣ್ಣೆ ಕೊಂಡರೆ ಆಯಿತು. ಯೋಚನೆ ಮಾಡಿ. ದೇಶದಲ್ಲಿ ಆಹಾರ ಉತ್ಪಾದನೆ ಹೇಗೆ ಇಷ್ಟು ಕಡಿಮೆಯಾಯಿತು.<br /> <br /> ಪ್ರತಿಯೊಂದು ಕೃಷಿ ಮೂಲದ ಆಹಾರ ಪದಾರ್ಥಗಳ ಬೆಲೆ ಎಷ್ಟು ಏರಿದೆ ನಿಮಗೇ ಗೊತ್ತು. ರಾಜಕಾರಣಿಗಳು ಜನಸಂಪನ್ಮೂಲಕ್ಕೆ ಕೊಡಲಿಪೆಟ್ಟು ಕೊಟ್ಟರು. 1 ರೂ.ಗೆ ಅಕ್ಕಿ ಇತ್ಯಾದಿ ಕ್ರಮಗಳು ಜನರ ನೈತಿಕತೆಯನ್ನೇ ಹಾಳು ಮಾಡಿವೆ. ಆಹಾರ ಪದಾರ್ಥ ಕಣ್ಮರೆಯಾಗುವ ಸ್ಥಿತಿ ಬರಬಹುದು. ಬಿಟ್ಟಿ ಕೊಡುವುದು ಜನರ ಛಲ, ಅಭಿಮಾನ, ಶ್ರಮ ಇತ್ಯಾದಿಗಳನ್ನು ನಾಶಪಡಿಸುತ್ತದೆ.<br /> <strong>-ಲಿಂಗಣ್ಣ, ಕೊಪ್ಪ .</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size:36px;">ರೂ</span>ಪಾಯಿಗೆ ಕೆ.ಜಿ. ಅಕ್ಕಿಯಂತೆ ಬಡವರಿಗೆ ತಿಂಗಳಿಗೆ 30 ಕೆ.ಜಿ. ಅಕ್ಕಿ ಕೊಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಈ ತಿಂಗಳ 4ರ ಸಂಚಿಕೆಯಲ್ಲಿ ಸವಿತಾ ನಾಗಭೂಷಣ ಸಮರ್ಥಿಸಿದ್ದಾರೆ. ನಾನು ಪದವೀಧರ ಆಗಿ ನೌಕರಿ ಬಿಟ್ಟು ಊರು ಸೇರಿ ಕೃಷಿಯಲ್ಲಿ ತೊಡಗಿದೆ.<br /> <br /> ಕೃಷಿಗೆ ದುಡ್ಡು ಮಾತ್ರ ಇದ್ದರಾಗದು, ಜನ ಬೇಕು. ಪ್ರಾರಂಭದಲ್ಲಿ (1970-80ರ ದಶಕ) ಕಾರ್ಮಿಕರು ಸಿಗುತ್ತಿದ್ದರು, ಕೆಲಸ ಚೆನ್ನಾಗಿ ಆಗುತ್ತಿತ್ತು, ಕಾರ್ಮಿಕರಿಗೆ ಮುಂಗಡವನ್ನೂ ಕೊಡುತ್ತಿದ್ದೆವು, ಕಷ್ಟಕ್ಕೆ ಒತ್ತಾಸೆಯಾಗಿರುತ್ತಿದ್ದೆವು. ಆರ್ಥಿಕ ದೃಷ್ಟಿಯಿಂದ ಉತ್ಪಾದನೆ ಹೆಚ್ಚಾಗಿರುತ್ತಿತ್ತು, ಬೆಲೆ ಏರಿಕೆಗೆ ತಡೆ ಇತ್ತು. ಕ್ರಮೇಣ 2000ದ ಹೊತ್ತಿಗೆ ನಗರಕ್ಕೆ ವಲಸೆ ಹೆಚ್ಚಾಯಿತು.</p>.<p>ನಗರದಲ್ಲಿ ಬಿ.ಪಿ.ಎಲ್. ಕಾರ್ಡುಗಳು ಲಭ್ಯವಾದುವು, ಹಳ್ಳಿಗಳಲ್ಲಿ ಉಳಿದಿದ್ದವರು ಬಿ.ಪಿ.ಎಲ್. ಪಡೆದುಕೊಂಡರು. ಅಕ್ಕಿ ಕೆ.ಜಿ.ಗೆ 3 ರೂ ಆಯಿತು. ಓಟಿನ ದೃಷ್ಟಿಯಿಂದ ಒಂದು ರೂ ಆಗಿದೆ. ನಾಳೆ ಬಿಟ್ಟಿ ಕೊಡುವುದೂ ಆಗುತ್ತೇನೋ. ಈಗ ನಮ್ಮ 8 ಎಕರೆ, ತೆಕ್ಕಲು, ಬದುಕು ಸಾಮಾನ್ಯ ಮಧ್ಯಮ ಮಟ್ಟದ್ದಾಯಿತು. ಎರಡು ಎಕರೆಗೆ ಕೃಷಿ ಸೀಮಿತವಾಯಿತು.</p>.<p>ಊರಿನಲ್ಲಿದ್ದ ಸಣ್ಣ ರೈತರು, ಕಾರ್ಮಿಕರು ಬಿಪಿಎಲ್ ಪಡೆದರು. ಕುಡಿತ ಹೆಚ್ಚಾಯಿತು. ಒಬ್ಬ ರೈತ ಈ ಸಲ 1 ಎಕರೆಗೆ 6 ಟನ್ ಕಬ್ಬು ಬೆಳೆದಿದ್ದಾನೆ! ಒಂದು ರೂಪಾಯಿಗೆ ಕೆ.ಜಿ. ಅಕ್ಕಿ, ಗೋಧಿ (?) ಕೊಟ್ಟರೆ ದುಡಿಯುವ ಅನಿವಾರ್ಯತೆ ಎಲ್ಲಿದೆ. ಏನೋ ಪುಡಿ ಕೆಲಸ ಮಾಡಿ ಬೇಳೆ, ಎಣ್ಣೆ ಕೊಂಡರೆ ಆಯಿತು. ಯೋಚನೆ ಮಾಡಿ. ದೇಶದಲ್ಲಿ ಆಹಾರ ಉತ್ಪಾದನೆ ಹೇಗೆ ಇಷ್ಟು ಕಡಿಮೆಯಾಯಿತು.<br /> <br /> ಪ್ರತಿಯೊಂದು ಕೃಷಿ ಮೂಲದ ಆಹಾರ ಪದಾರ್ಥಗಳ ಬೆಲೆ ಎಷ್ಟು ಏರಿದೆ ನಿಮಗೇ ಗೊತ್ತು. ರಾಜಕಾರಣಿಗಳು ಜನಸಂಪನ್ಮೂಲಕ್ಕೆ ಕೊಡಲಿಪೆಟ್ಟು ಕೊಟ್ಟರು. 1 ರೂ.ಗೆ ಅಕ್ಕಿ ಇತ್ಯಾದಿ ಕ್ರಮಗಳು ಜನರ ನೈತಿಕತೆಯನ್ನೇ ಹಾಳು ಮಾಡಿವೆ. ಆಹಾರ ಪದಾರ್ಥ ಕಣ್ಮರೆಯಾಗುವ ಸ್ಥಿತಿ ಬರಬಹುದು. ಬಿಟ್ಟಿ ಕೊಡುವುದು ಜನರ ಛಲ, ಅಭಿಮಾನ, ಶ್ರಮ ಇತ್ಯಾದಿಗಳನ್ನು ನಾಶಪಡಿಸುತ್ತದೆ.<br /> <strong>-ಲಿಂಗಣ್ಣ, ಕೊಪ್ಪ .</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>