ಜ್ಞಾನಭಾರತಿ ವಿಶ್ವವಿದ್ಯಾಲಯ ರೈಲ್ವೆ ಗೇಟ್ ಬಳಿ ಇರುವ ಬೃಹತ್ ಕಂಬದ (ವೃತ್ತದಲ್ಲಿ) ನಾಲ್ಕು ದಿಕ್ಕಿನ ದೀಪಗಳು ಕೆಟ್ಟು ನಾಲ್ಕು ತಿಂಗಳುಗಳಾಗಿವೆ. ಈವರೆಗೆ ಇದು ರಿಪೇರಿ ಆಗಿಲ್ಲ. ರಾತ್ರಿ 10 ಗಂಟೆಯವರೆಗೂ ಇಲ್ಲಿನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕಾದಿರುತ್ತಾರೆ. ಮಹಿಳೆಯರು ಭಯ ಪಡುವ ಸ್ಥಿತಿ ಇದೆ. ಆಗಲಿರುವ ಅವಘಡಗಳನ್ನು ತಪ್ಪಿಸಲು ಈ ವೃತ್ತದ ಕೆಟ್ಟಿರುವ ದೀಪಗಳನ್ನು ಸರಿಪಡಿಸಬೇಕು.