ಮೊನ್ನೆ ಘಟಿಸಿತು
ವರ್ಷದ ಪ್ರಥಮ ಸೂರ್ಯಗ್ರಹಣ
ವಿಜ್ಞಾನಿಗಳು ಪ್ರಕೃತಿಯ ಈ ವಿಸ್ಮಯವನ್ನು
ಕಣ್ತುಂಬಿಕೊಂಡು ಆನಂದಿಸಿದರೆ
ಇತ್ತ ಮಡಿವಂತರು ಮೂಢನಂಬಿಕೆಯ
ಗಾಢಾಂಧಕಾರದಲ್ಲಿ ಮುಳುಗಿದರು,
ವಿಜ್ಞಾನ ಆಕಾಶದೆತ್ತರಕ್ಕೆ ಬೆಳೆದರೂ
ಚಂದ್ರ, ಮಂಗಳನ ಅಂಗಳದಲ್ಲಿ
ಅಡಗಿರುವ ರಾಶಿ ರಾಶಿ ವಿಸ್ಮಯಗಳನ್ನು
ತಂದು ಸುರಿದರೂ
ಅಂಧ ಜನರ ಬುದ್ಧಿಗೆ ಹಿಡಿದ ರಾಹು
ಕೇತುಗಳನ್ನು ಬಿಡಿಸಲು ಮಾತ್ರ
ಸಾಧ್ಯವಾಗಲಿಲ್ಲ,
ಇನ್ನೂ ಎಷ್ಟು ಶತಮಾನಗಳು ಬೇಕೋ
ಜನರ ಬುದ್ಧಿಗೆ ಕವಿದ ಮೂಢನಂಬಿಕೆಯ
ಗ್ರಹಣ ಬಿಡಲು.