<p>ಸಾಹಿತ್ಯ ಸಮ್ಮೇಳನದಲ್ಲಿ ಚಂಪಾ ಮಾಡಿರುವ ಭಾಷಣವನ್ನು ಟೀಕಿಸುವ ಭರದಲ್ಲಿ ಒಂದು ರಾಜಕೀಯ ಪಕ್ಷದವರು ಸಾಹಿತಿಗಳ ತೇಜೋವಧೆ ಆರಂಭಿಸಿದ್ದಾರೆ. ಬಹಳಷ್ಟು ಸಾಹಿತಿಗಳು ಬಾಯಿಗೆ ಬೀಗಹಾಕಿ ಕುಳಿತಿದ್ದಾರೆ. ‘ಇದ್ದದ್ದು ಇದ್ದ ಹಾಗೆ’ ಮಾತನಾಡುವ, ಬರೆಯುವ ಮಂದಿಯ ಸದ್ಯದ ಸ್ಥಿತಿ ಇದು.</p>.<p>‘ಜಾತ್ಯತೀತ ಪಕ್ಷಗಳನ್ನು ಬೆಂಬಲಿಸಿ’ ಅಂದರೆ ನಾವು ಒಪ್ಪಿಕೊಂಡ ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಕೊಡುವ ಮರ್ಯಾದೆಯೇ ಹೊರತು ವಿವಾದದ ಮಾತಲ್ಲ. ಕಟು ಮಾತಿಗೆ ಹೆಸರಾದ ಚಂಪಾ ಅವರು ಇಂಥ ಟೀಕೆಗಳನ್ನು ಎದುರಿಸುವ ಛಾತಿಯುಳ್ಳವರೂ ಹೌದು.</p>.<p>ಸಾಹಿತ್ಯ ಸಮ್ಮೇಳನಾಧ್ಯಕ್ಷರು ಪಾಂಡಿತ್ಯವನ್ನೇ ಮೆರೆಯಬೇಕೇ? ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಎಷ್ಟೋ ಸಾಹಿತಿಗಳ ಅಧ್ಯಕ್ಷೀಯ ಭಾಷಣಗಳು ಪುಸ್ತಕರೂಪದಲ್ಲೇ ಬಿದ್ದು ಕೊಳೆಯುತ್ತಿವೆ. ಚಂಪಾ ಅವರೂ ಅದನ್ನೇ ಮಾಡಿದ್ದರೆ ಅವರು ‘ಚಂಪಾ’ ಆಗುತ್ತಿರಲಿಲ್ಲ.</p>.<p>ಸತ್ತ ಮಾತುಗಳಿಗಿಂತ ಎಚ್ಚರ ಇಡುವ ಮಾತುಗಳ ಅವಶ್ಯಕತೆಯಿರುವ ಈ ಹೊತ್ತಿನಲ್ಲಿ ಚಂಪಾ ಆಡಿದ ಮಾತುಗಳು ‘ಬರೊಬ್ಬರಿ’ ಇವೆ. ಇದರಲ್ಲಿ ರಾಜಕೀಯ ವಾಸನೆ ಇರಬಾರದಿತ್ತು ಅಂದರೆ, ಸಾಹಿತಿಯಾದವನು ಗಡ್ಡ ನೀವಿಕೊಂಡು ಪ್ರಕಾಂಡ ಪಾಂಡಿತ್ಯವನ್ನಷ್ಟೇ ಬಿತ್ತರಿಸಿ ‘ಶಹಬ್ಬಾಸ್ಗಿರಿ’ ಪಡೆದುಕೊಳ್ಳಬೇಕಿತ್ತೇ?</p>.<p><strong>ಹಾನಗಲ್ಲ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಹಿತ್ಯ ಸಮ್ಮೇಳನದಲ್ಲಿ ಚಂಪಾ ಮಾಡಿರುವ ಭಾಷಣವನ್ನು ಟೀಕಿಸುವ ಭರದಲ್ಲಿ ಒಂದು ರಾಜಕೀಯ ಪಕ್ಷದವರು ಸಾಹಿತಿಗಳ ತೇಜೋವಧೆ ಆರಂಭಿಸಿದ್ದಾರೆ. ಬಹಳಷ್ಟು ಸಾಹಿತಿಗಳು ಬಾಯಿಗೆ ಬೀಗಹಾಕಿ ಕುಳಿತಿದ್ದಾರೆ. ‘ಇದ್ದದ್ದು ಇದ್ದ ಹಾಗೆ’ ಮಾತನಾಡುವ, ಬರೆಯುವ ಮಂದಿಯ ಸದ್ಯದ ಸ್ಥಿತಿ ಇದು.</p>.<p>‘ಜಾತ್ಯತೀತ ಪಕ್ಷಗಳನ್ನು ಬೆಂಬಲಿಸಿ’ ಅಂದರೆ ನಾವು ಒಪ್ಪಿಕೊಂಡ ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಕೊಡುವ ಮರ್ಯಾದೆಯೇ ಹೊರತು ವಿವಾದದ ಮಾತಲ್ಲ. ಕಟು ಮಾತಿಗೆ ಹೆಸರಾದ ಚಂಪಾ ಅವರು ಇಂಥ ಟೀಕೆಗಳನ್ನು ಎದುರಿಸುವ ಛಾತಿಯುಳ್ಳವರೂ ಹೌದು.</p>.<p>ಸಾಹಿತ್ಯ ಸಮ್ಮೇಳನಾಧ್ಯಕ್ಷರು ಪಾಂಡಿತ್ಯವನ್ನೇ ಮೆರೆಯಬೇಕೇ? ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಎಷ್ಟೋ ಸಾಹಿತಿಗಳ ಅಧ್ಯಕ್ಷೀಯ ಭಾಷಣಗಳು ಪುಸ್ತಕರೂಪದಲ್ಲೇ ಬಿದ್ದು ಕೊಳೆಯುತ್ತಿವೆ. ಚಂಪಾ ಅವರೂ ಅದನ್ನೇ ಮಾಡಿದ್ದರೆ ಅವರು ‘ಚಂಪಾ’ ಆಗುತ್ತಿರಲಿಲ್ಲ.</p>.<p>ಸತ್ತ ಮಾತುಗಳಿಗಿಂತ ಎಚ್ಚರ ಇಡುವ ಮಾತುಗಳ ಅವಶ್ಯಕತೆಯಿರುವ ಈ ಹೊತ್ತಿನಲ್ಲಿ ಚಂಪಾ ಆಡಿದ ಮಾತುಗಳು ‘ಬರೊಬ್ಬರಿ’ ಇವೆ. ಇದರಲ್ಲಿ ರಾಜಕೀಯ ವಾಸನೆ ಇರಬಾರದಿತ್ತು ಅಂದರೆ, ಸಾಹಿತಿಯಾದವನು ಗಡ್ಡ ನೀವಿಕೊಂಡು ಪ್ರಕಾಂಡ ಪಾಂಡಿತ್ಯವನ್ನಷ್ಟೇ ಬಿತ್ತರಿಸಿ ‘ಶಹಬ್ಬಾಸ್ಗಿರಿ’ ಪಡೆದುಕೊಳ್ಳಬೇಕಿತ್ತೇ?</p>.<p><strong>ಹಾನಗಲ್ಲ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>