ಕೆಂಚೇನಹಳ್ಳಿಯಿಂದ ಮೈಸೂರು ರಸ್ತೆಗೆ ಲಿಂಕ್ ನೀಡುವ ರಸ್ತೆಯು ಕೆಸರಿನಿಂದ, ಕೊಚ್ಚೆ ನೀರಿನಿಂದ, ಬುರುದೆಯಿಂದ ತುಂಬಿದೆ. ಪ್ರತಿದಿನ ಈ ರಸ್ತೆಯಲ್ಲಿ ಸಾವಿರಾರು ಜನರು ವಿವಿಧ ಫ್ಯಾಕ್ಟರಿಗಳಿಗೆ ಹೋಗುತ್ತಾರೆ. ಆದರೆ ಯಾರಿಗೂ ನಿರಾಳವಾಗಿ ಸಾಗಲು ಆಗುತ್ತಿಲ್ಲ.
ಕಾರಣ ಇಡೀ ರಸ್ತೆಯೆಲ್ಲಾ ಕೆಸರು ಮಣ್ಣಿನಿಂದ ತುಂಬಿರುತ್ತದೆ. ಜೊತೆಗೆ ಮಳೆ ಬಂದಾಗ ಆ ನೀರು ಸೇರಿದರೆ ಮುಗಿಯಿತು. ಈ ರಸ್ತೆ ಬಿಟ್ಟು ಬೇರೆ ರಸ್ತೆಯಿಲ್ಲ. ಸಾರ್ವಜನಿಕರು ಈ ರಸ್ತೆಯನ್ನೇ ನಂಬಿಕೊಂಡಿದ್ದಾರೆ. ಜನರು ಪ್ರತಿದಿನ ಈ ರಸ್ತೆಯಲ್ಲಿ ಸರ್ಕಸ್ ಮಾಡಿಕೊಂಡು ತಿರುಗಾಡಬೇಕಾಗಿದೆ. ಸಂಬಂಧಿಸಿದ ಅಧಿಕಾರಿಗಳು ಈ ರಸ್ತೆಗೆ ಡಾಂಬರು ಹಾಕಿಸಿಕೊಡಬೇಕು ಅಥವಾ ಸಿಮೆಂಟ್ನಿಂದಲಾದರೂ ರಸ್ತೆಯನ್ನು ಸರಿ ಮಾಡಿಕೊಡಬೇಕಾಗಿ ಪ್ರಾರ್ಥಿಸುತ್ತೇವೆ.