ಬಸವನಗುಡಿ ಮಲ್ಲಿಕಾರ್ಜುನಸ್ವಾಮಿ ರಸ್ತೆಯಲ್ಲಿರುವ ಕಾವೇರಿ ನೀರು ಸರಬರಾಜು ಟ್ಯಾಂಕಿನ ದೊಡ್ಡ ದೊಡ್ಡ ಪೈಪುಗಳನ್ನು ಹಲವಾರು ವರ್ಷಗಳಿಂದ ಪಾದಚಾರಿಗಳು ಓಡಾಡುವ ಜಾಗದಲ್ಲಿ ಹಾಕಿರುತ್ತಾರೆ. ಈ ಪೈಪುಗಳು ತುಕ್ಕುಹಿಡಿದು ತುಂಬಾ ಗಲೀಜಾಗಿರುತ್ತವೆ.
ಹೆಗ್ಗಣ, ಹಾವುಗಳು ಇದರಲ್ಲಿ ವಾಸವಾಗಿದ್ದು, ಓಡಾಡುವುದೇ ಕಷ್ಟ. ಸಮೀಪದಲ್ಲಿಯೇ ಆಚಾರ್ಯ ಪಾಠಶಾಲೆ ಇದ್ದು, ಶಾಲೆಯ ಮಕ್ಕಳು, ಪೋಷಕರಿಗೆ ಇದರಿಂದಾಗಿ ತುಂಬಾ ತೊಂದರೆಯುಂಟಾಗುತ್ತಿದೆ. ಜಲಮಂಡಲಿಯ ನೀರು ಸರಬರಾಜು ಕೇಂದ್ರದಲ್ಲಿ ಬಹಳಷ್ಟು ಜಾಗವಿದ್ದರೂ ಈ ರೀತಿ ಈ ಪೈಪುಗಳನ್ನು ಫುಟ್ಪಾತ್ ಮೇಲೆ ಹಾಕಿರುವುದು ಖಂಡನೀಯ. ಅಧಿಕಾರಿಗಳು ಕೂಡಲೇ ಪರಿಶೀಲಿಸಿ ಈ ಪೈಪುಗಳನ್ನು ಸ್ಥಳಾಂತರಿಸಬೇಕಾಗಿ ಕೋರುತ್ತೇನೆ.