ಮಂಜುನಾಥನಗರ ಮುಖ್ಯರಸ್ತೆಯ ಮೂಲಕ ಪಶ್ಚಿಮ ಕಾರ್ಡ್ ರಸ್ತೆ ಪೂರ್ವ ಭಾಗಕ್ಕೆ ತಲುಪುವ ನಾಲ್ಕು ದಿಕ್ಕಿನ ವೃತ್ತವು (ಪಾರ್ಕ್ ಬಳಿ) ದಟ್ಟವಾದ ವಾಹನ ಸಂಚಾರದಿಂದ ಕೂಡಿದೆ.
ಇಲ್ಲಿ ಟ್ರಾಫಿಕ್ ಸಿಗ್ನಲ್ ಇಲ್ಲದ ಕಾರಣ ಜನರಿಗೆ ರಸ್ತೆ ದಾಟಲು ಬಹಳ ಕಿರಿಕಿರಿಯಾಗಿದೆ. ವೃದ್ಧರು, ಶಾಲಾ ಮಕ್ಕಳು, ಸ್ತ್ರೀಯರು ಒಂದು ರಸ್ತೆಯಿಂದ ಇನ್ನೊಂದು ರಸ್ತೆಗೆ ಸಾಗಲು ನಿತ್ಯವೂ ಶ್ರಮ ಪಡಬೇಕು.
ಆದ್ದರಿಂದ ಮಂಜುನಾಥನಗರದ ಮುಖ್ಯ ರಸ್ತೆಯಿಂದ ಪಶ್ಚಿಮ ಕಾರ್ಡ್ ರಸ್ತೆ ತಲುಪುವ ವೃತ್ತದಲ್ಲಿ (ಚರ್ಚ್ ಸಮೀಪ) ‘ಟ್ರಾಫಿಕ್ ಸಿಗ್ನಲ್ ದೀಪ’ವನ್ನು ಅಳವಡಿಸುವ ಮೂಲಕ ದಟ್ಟ ವಾಹನಗಳ ಸಂಚಾರವನ್ನು ನಿಯಂತ್ರಿಸಬಹುದು.
ಇದರಿಂದ ನಿತ್ಯವೂ ಸಂಚರಿಸುವ ಪಾದಚಾರಿಗಳು ಒಂದು ಬದಿಯಿಂದ ಮತ್ತೊಂದು ಬದಿಗೆ ತಲುಪಲು ಹೆಚ್ಚಿನ ಅನುಕೂಲವಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ, ಸಹಕರಿಸಬೇಕು.