ಬಡವರ ಹಿತರಕ್ಷಣಾ ವೇದಿಕೆಯವರು ತಮ್ಮ ಬೇಡಿಕೆ ಈಡೇರಿಕೆಗಾಗಿ ಬೆಂಗಳೂರಿನಲ್ಲಿ ಮೈ ಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ಮಾಡಿದ್ದು ಸರಿಯಲ್ಲ.
ಬೇಡಿಕೆ ಎಷ್ಟೇ ಗಂಭೀರವಾಗಿದ್ದರೂ ನಾವು ತಾಳ್ಮೆ ಕಳೆದುಕೊಳ್ಳಬಾರದು. ಅಹಿಂಸಾತ್ಮಕ ಹಾಗೂ ಗೌರವಯುತ ಪ್ರತಿಭಟನೆಗಳ ಮೂಲಕ ಜನ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು ಎಂಬ ಸಂದೇಶವನ್ನು ಗಾಂಧೀಜಿ ಜಗತ್ತಿಗೆ ಕೊಟ್ಟಿದ್ದಾರೆ.
ಈ ವಿಚಾರದಲ್ಲಿ ಭಾರತ ಜಗತ್ತಿಗೆ ಮಾದರಿ ಆಗಿರುವಾಗ, ನಾವೇಕೆ ಇಂಥ ಪ್ರತಿಭಟನೆಗಳಿಗೆ ಮುಂದಾಗಬೇಕು? ಇನ್ನು ಮುಂದಾದರೂ ಪ್ರತಿಭಟನಾಕಾರರು ಯೋಚನೆ ಮಾಡಬೇಕು.