ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಢೀರನೆ ರಾಜಕೀಯ ರಂಗಕ್ಕೆ ಧುಮುಕಲು ಸಿದ್ಧತೆ ಎಲ್ಲಿ?

Last Updated 2 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕೆಲವು ಸಿನಿಮಾ ನಟ– ನಟಿಯರು ರಾಜಕೀಯ ರಂಗಪ್ರವೇಶಕ್ಕೆ ವಿಶೇಷ ಅಸಕ್ತಿ ತೋರಿಸುತ್ತಿದ್ದಾರೆ. ಇಂಥವರಿಗೆಲ್ಲ ಎಂ.ಜಿ.ಆರ್. ಸ್ಫೂರ್ತಿಯಾಗಿರಬೇಕು. ಒಬ್ಬ ಹೀರೊ, ರಾಜಕೀಯ ನಾಯಕನಾಗಿ ಮಿಂಚಲು ಸಾಧ್ಯ ಎಂಬುದಕ್ಕೆ ಎಂ.ಜಿ.ಆರ್. ಒಂದು ಮಾದರಿಯಾಗಿದ್ದಾರೆ. ಆದರೆ ಎಂ.ಜಿ.ಆರ್. ರಾಜಕೀಯ ರಂಗ ಪ್ರವೇಶಕ್ಕೆ ಬಹಳಷ್ಟು ಸಿದ್ಧತೆ ಮಾಡಿಕೊಂಡಿದ್ದರು. ಅದನ್ನು ಮರೆಯಬಾರದು.

ಪ್ರತಿ ಚಿತ್ರದಲ್ಲೂ ಜನಪರ ಹೋರಾಟದಲ್ಲಿ ತೊಡಗಿದ ಮುಖಂಡನ ಪಾತ್ರವನ್ನೇ ಆಯ್ದುಕೊಂಡರು. ಆ ಮೂಲಕ, ತನ್ನನ್ನು ರಾಜಕೀಯ ನೇತಾರನನ್ನಾಗಿ ಜನರು ಒಪ್ಪಿಕೊಳ್ಳುವಂತೆ ಅವರನ್ನು ಮಾನಸಿಕವಾಗಿ ಸಿದ್ಧಗೊಳಿಸುವ ಕೆಲಸ ಮಾಡಿದ್ದರು. ನಟನಾಗಿರುವಾಗಲೇ ಜನಪರ ಕಾರ್ಯದಲ್ಲಿ ತೊಡಗಿಸಿಕೊಂಡು ಅನೇಕರಿಗೆ ಸಹಾಯ ನೀಡಿದ್ದರು.

ಇಂತಹ ಯಾವ ಪೂರ್ವ ಸಿದ್ಧತೆಯೂ ಇಲ್ಲದೆ ದಿಢೀರನೆ ರಾಜಕೀಯ ರಂಗಕ್ಕೆ ಧುಮುಕಿ, ತಾರಾ ವರ್ಚಸ್ಸಿನ ಬಲದಿಂದಲೇ ಜನರನ್ನು ಒಲಿಸಿಕೊಳ್ಳಬಹುದು ಎಂದು ಭಾವಿಸುವುದು ಬರೀ ಭ್ರಮೆ.

–ಸತ್ಯಬೋಧ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT