ಗಾರ್ಡನ್ ಸಿಟಿಯಿಂದ ಗಾರ್ಬೆಜ್ ಸಿಟಿಯಾದ ಬೆಂಗಳೂರು ಈಗ ಡಸ್್ಟಸಿಟಿಯಾಗಿದೆ. ಬೆಂಗಳೂರಿನಲ್ಲಿ ವಾಯುಮಾಲಿನ್ಯ ಮಿತಿಮೀರಿದೆ ಎಂದಿರುವ ವಿಶ್ವಸಂಸ್ಥೆಯ 2014ರ ವರದಿ ಸರ್ಕಾರ, ಬಿಬಿಎಂಪಿ ಹಾಗೂ ಜನಪ್ರತಿನಿಧಿಗಳಲ್ಲಿ ಅರಿವು ಎಚ್ಚರ ಮೂಡಿಸಲಿ. ಬೆಂಗಳೂರಿನಲ್ಲಿ ಸಂಚರಿಸುವ ವಾಹನಗಳ ಅತಿ ಹೊಗೆಯಿಂದ ಹಲವು ಮಂದಿ ಸಾವನ್ನಪ್ಪುತ್ತಿರುವುದು ವಿಪರ್ಯಾಸ. ವಾಯುಮಾಲಿನ್ಯವನ್ನು ಕಡಿಮೆ ಮಾಡುವ ಸರಳ ಸುಲಭ ಉಪಾಯ, ಗಿಡಮರಗಳ ಬೆಳಸುವಿಕೆ ಹಾಗೂ ಅವುಗಳ ಮಾರಣಹೋಮ ನಿರಂತರವಾಗಿ ನಡೆದಿದೆ. ವಾಯುಮಾಲಿನ್ಯದಿಂದ ನಗರದ ನಾಗರಿಕರು ನಾನಾ ರೋಗಗಳಿಂದ ನರಳುತ್ತಿದ್ದರೂ ನಗರದ ಜನಪ್ರತಿನಿಧಿಗಳು ಬಿಬಿಎಂಪಿ ಡಸ್್ಟಸಿಟಿಯನ್ನು ಗ್ರೀನ್ಸಿಟಿ ಮಾಡುವ ಯಾವ ಕ್ರಮವನ್ನೂ ಕೈಗೊಂಡಿಲ್ಲ ಏಕೆ?