ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಿಕ್ಕಾರ

Last Updated 19 ಫೆಬ್ರುವರಿ 2016, 19:32 IST
ಅಕ್ಷರ ಗಾತ್ರ

ಹುತಾತ್ಮ ಯೋಧ ಲ್ಯಾನ್ಸ್ ನಾಯಕ್‌ ಹನುಮಂತಪ್ಪ ಕೊಪ್ಪದ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಪತ್ನಿ ಮಹಾದೇವಿ ಅವರ ತಾಳಿ ಕಿತ್ತು ಬಳೆ ಒಡೆಸಿದ್ದನ್ನು ಟಿ.ವಿ.ಯಲ್ಲಿ ಕಂಡು ತುಂಬಾ ನೋವಾಯಿತು. ಅಲ್ಲಿ ನೂರಾರು ಮಂದಿ ಗಣ್ಯರು, ಮಠಾಧೀಶರು ಇದ್ದಾಗ್ಯೂ ಇಂತಹ ಸನ್ನಿವೇಶ ಉಂಟಾದುದು ದುರ್ದೈವದ ಸಂಗತಿ. ಯೋಧ ಹನುಮಂತಪ್ಪನವರೇ ವಿಧವೆ ಮಹಾದೇವಿ ಅವರನ್ನು ವರಿಸಿದ್ದರು. ಅಂತಹ ಉದಾತ್ತ ವ್ಯಕ್ತಿಯ ಬಾಳ ಸಂಗಾತಿಗೆ ಸಂಪ್ರದಾಯದ ಹೆಸರಿನಲ್ಲಿ ಇದೆಂತಹ ಶಿಕ್ಷೆ? ನೊಂದವರಿಗೆ ಮತ್ತೆ ಮತ್ತೆ ನೋವು ನೀಡುವ ಇಂತಹ ಅನಿಷ್ಟ ಪದ್ಧತಿಗಳಿಗೆ ಧಿಕ್ಕಾರ!

ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT