ಹುತಾತ್ಮ ಯೋಧ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಪತ್ನಿ ಮಹಾದೇವಿ ಅವರ ತಾಳಿ ಕಿತ್ತು ಬಳೆ ಒಡೆಸಿದ್ದನ್ನು ಟಿ.ವಿ.ಯಲ್ಲಿ ಕಂಡು ತುಂಬಾ ನೋವಾಯಿತು. ಅಲ್ಲಿ ನೂರಾರು ಮಂದಿ ಗಣ್ಯರು, ಮಠಾಧೀಶರು ಇದ್ದಾಗ್ಯೂ ಇಂತಹ ಸನ್ನಿವೇಶ ಉಂಟಾದುದು ದುರ್ದೈವದ ಸಂಗತಿ. ಯೋಧ ಹನುಮಂತಪ್ಪನವರೇ ವಿಧವೆ ಮಹಾದೇವಿ ಅವರನ್ನು ವರಿಸಿದ್ದರು. ಅಂತಹ ಉದಾತ್ತ ವ್ಯಕ್ತಿಯ ಬಾಳ ಸಂಗಾತಿಗೆ ಸಂಪ್ರದಾಯದ ಹೆಸರಿನಲ್ಲಿ ಇದೆಂತಹ ಶಿಕ್ಷೆ? ನೊಂದವರಿಗೆ ಮತ್ತೆ ಮತ್ತೆ ನೋವು ನೀಡುವ ಇಂತಹ ಅನಿಷ್ಟ ಪದ್ಧತಿಗಳಿಗೆ ಧಿಕ್ಕಾರ!