‘ಧ್ವಜಾರೋಹಣಕ್ಕೂ ಭತ್ಯೆ ಬೇಕೇ?’ (ವಾ.ವಾ, ಸೆ. 24) ಕುರಿತಂತೆ ಈ ಪತ್ರ. ಸ್ವಾತಂತ್ರ್ಯ ಯೋಧರಿಗೆ ಸರ್ಕಾರವು ಉಚಿತ ನಿವೇಶನಗಳನ್ನು ಅವರವರ ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲಿ ಒದಗಿಸಿರುವುದು, ಜತೆಗೆ ಅವರಿಗೂ ಅವರ ಅವಿವಾಹಿತ ಹೆಣ್ಣುಮಕ್ಕಳಿಗೂ ಮಾಸಾಶನ ಕೊಡುತ್ತಿರುವುದು ಸ್ವಾಮಿಯವರ ಗಮನಕ್ಕೆ ಬಂದಂತಿಲ್ಲ.
ಹೀಗಿರುವಾಗ ಯಾವುದೇ ಭತ್ಯೆಯಿಲ್ಲದೇ ಪ್ರತೀ ದಿನ ಧ್ವಜಾರೋಹಣ ಕೆಲಸವನ್ನು ಅಪೇಕ್ಷಿಸುವುದು ಯಾವ ನ್ಯಾಯ? ಹಣದುಬ್ಬರದ ಕಾಲದಲ್ಲಿ ಕನಿಷ್ಠ ಗೌರವಧನ ತೆಗೆದುಕೊಂಡು ಕಚೇರಿ ಕೆಲಸಗಳನ್ನು ನಿರ್ವಹಿಸುತ್ತಿರುವ ನೌಕರರಿಗೆ ಧ್ವಜಾರೋಹಣಕ್ಕೆರೂ 30 ಭತ್ಯೆ ನೀಡುವುದು ಹೆಚ್ಚೇನಲ್ಲ.