<p>ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರೆ, ನಿಮಗೆ ನನ್ನ ಒಂದು ಪ್ರಾಮಾಣಿಕ ಪ್ರಶ್ನೆ. ಈ ಪ್ರಶ್ನೆ ಅನೇಕ ನಿಸ್ವಾರ್ಥ, ನಿಷ್ಠಾವಂತ ಸ್ವಯಂ ಸೇವಕರನ್ನು ಬಹಳ ದಿನಗಳಿಂದ ಕಾಡಿಸುತ್ತದೆ. ಈಗಿನ ಕರ್ನಾಟಕದ ರಾಜಕೀಯ ಈ ಪ್ರಶ್ನೆಯನ್ನು ಸಾರ್ವಜನಿಕವಾಗಿ ಪ್ರಶ್ನಿಸುವಂತೆ ಮಾಡಿದೆ.<br /> <br /> ಸಂಘದ ಸ್ವಯಂಸೇವಕರು ಸಂಘ ಸಂಪರ್ಕವಾದಾಗಿನಿಂದಲೂ ನಿಸ್ವಾರ್ಥತೆಯನ್ನು ಸಂಘದ ಮತ್ತು ರಾಷ್ಟ್ರದ ಬಗ್ಗೆ ನಿಷ್ಠತೆಯನ್ನು ಪ್ರಶ್ನಾತೀತವಾಗಿ ಪಾಲಿಸುವುದು ಸಂಘದ ಸಂಸ್ಕೃತಿ.<br /> <br /> ಕಾಲಾನುಕಾಲಕ್ಕೆ ಕಾರಣಾಂತರಗಳಿಂದ, ಸಾಂದರ್ಭಿಕವಾಗಿ ಅನೇಕ ಸ್ವಯಂ ಸೇವಕರುಗಳು ಬಿ.ಜೆ.ಪಿ. ವತಿಯಿಂದ ರಾಷ್ಟ್ರದ ಮತ್ತು ರಾಜ್ಯಗಳ ರಾಜಕೀಯ ಸಂಪರ್ಕಕ್ಕೆ ಬಂದಿದ್ದಾರೆ. ರಾಜಕೀಯ ಜೀವನದಲ್ಲಿ ಈ ಸ್ವಯಂ ಸೇವಕರುಗಳು ಇಚ್ಛೆ ಇದ್ದೋ ಇಲ್ಲದೆಯೋ, ಸಂಘ ಸಂಸ್ಕೃತಿಗೆ ಸಾಕಷ್ಟು ವಿದಾಯ ಹೇಳಿದ್ದಾರೆ.<br /> <br /> ಈ ಬೆಳವಣಿಗೆ ಬಗ್ಗೆ ಸಂಘದ ನಾಯಕರುಗಳು ಸಾಕಷ್ಟು ಗಮನ ಹರಿಸಿಲ್ಲವೆನಿಸುತ್ತದೆ.<br /> ಕರ್ನಾಟಕದಲ್ಲಿ ಸಂಪೂರ್ಣವಾಗಿ ಹದಗೆಟ್ಟ ರಾಜಕೀಯ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಆಗಮಿಸುತ್ತಿರುವ ಸರಸಂಘ ಚಾಲಕರಾದ ಮೋಹನ್ಜೀ ಭಾಗವತರಲ್ಲಿ ಒಂದು ವಿನಂತಿ.<br /> <br /> ಭ್ರಷ್ಟಾಚಾರದಿಂದ ಅಸ್ತಿತ್ವಕ್ಕೆ ಬಂದಿರುವ ಬಿ.ಜೆ.ಪಿ. ರಾಜ್ಯ ಸರ್ಕಾರ ಯಾವ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಭ್ರಷ್ಟಾಚಾರದಲ್ಲಿಯೇ ಮುಂದುವರೆಯುವುದು ಯಾವ ನಾಗರಿಕ ಪ್ರಜೆಯೂ ಒಪ್ಪುವಂತಹದ್ದಲ್ಲ. ಅತ್ಯಂತ ಮುಖ್ಯ ಸ್ಥಾನದಲ್ಲಿರುವ ಸಂಘದ ನಾಯಕರೇ ರಾಜ್ಯದಲ್ಲಿ ಸಂಘ ಸಂಸ್ಕೃತಿಯನ್ನು ಬೆಳೆಸುವುದು ಆದ್ಯತೆಯಾಗಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರೆ, ನಿಮಗೆ ನನ್ನ ಒಂದು ಪ್ರಾಮಾಣಿಕ ಪ್ರಶ್ನೆ. ಈ ಪ್ರಶ್ನೆ ಅನೇಕ ನಿಸ್ವಾರ್ಥ, ನಿಷ್ಠಾವಂತ ಸ್ವಯಂ ಸೇವಕರನ್ನು ಬಹಳ ದಿನಗಳಿಂದ ಕಾಡಿಸುತ್ತದೆ. ಈಗಿನ ಕರ್ನಾಟಕದ ರಾಜಕೀಯ ಈ ಪ್ರಶ್ನೆಯನ್ನು ಸಾರ್ವಜನಿಕವಾಗಿ ಪ್ರಶ್ನಿಸುವಂತೆ ಮಾಡಿದೆ.<br /> <br /> ಸಂಘದ ಸ್ವಯಂಸೇವಕರು ಸಂಘ ಸಂಪರ್ಕವಾದಾಗಿನಿಂದಲೂ ನಿಸ್ವಾರ್ಥತೆಯನ್ನು ಸಂಘದ ಮತ್ತು ರಾಷ್ಟ್ರದ ಬಗ್ಗೆ ನಿಷ್ಠತೆಯನ್ನು ಪ್ರಶ್ನಾತೀತವಾಗಿ ಪಾಲಿಸುವುದು ಸಂಘದ ಸಂಸ್ಕೃತಿ.<br /> <br /> ಕಾಲಾನುಕಾಲಕ್ಕೆ ಕಾರಣಾಂತರಗಳಿಂದ, ಸಾಂದರ್ಭಿಕವಾಗಿ ಅನೇಕ ಸ್ವಯಂ ಸೇವಕರುಗಳು ಬಿ.ಜೆ.ಪಿ. ವತಿಯಿಂದ ರಾಷ್ಟ್ರದ ಮತ್ತು ರಾಜ್ಯಗಳ ರಾಜಕೀಯ ಸಂಪರ್ಕಕ್ಕೆ ಬಂದಿದ್ದಾರೆ. ರಾಜಕೀಯ ಜೀವನದಲ್ಲಿ ಈ ಸ್ವಯಂ ಸೇವಕರುಗಳು ಇಚ್ಛೆ ಇದ್ದೋ ಇಲ್ಲದೆಯೋ, ಸಂಘ ಸಂಸ್ಕೃತಿಗೆ ಸಾಕಷ್ಟು ವಿದಾಯ ಹೇಳಿದ್ದಾರೆ.<br /> <br /> ಈ ಬೆಳವಣಿಗೆ ಬಗ್ಗೆ ಸಂಘದ ನಾಯಕರುಗಳು ಸಾಕಷ್ಟು ಗಮನ ಹರಿಸಿಲ್ಲವೆನಿಸುತ್ತದೆ.<br /> ಕರ್ನಾಟಕದಲ್ಲಿ ಸಂಪೂರ್ಣವಾಗಿ ಹದಗೆಟ್ಟ ರಾಜಕೀಯ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಆಗಮಿಸುತ್ತಿರುವ ಸರಸಂಘ ಚಾಲಕರಾದ ಮೋಹನ್ಜೀ ಭಾಗವತರಲ್ಲಿ ಒಂದು ವಿನಂತಿ.<br /> <br /> ಭ್ರಷ್ಟಾಚಾರದಿಂದ ಅಸ್ತಿತ್ವಕ್ಕೆ ಬಂದಿರುವ ಬಿ.ಜೆ.ಪಿ. ರಾಜ್ಯ ಸರ್ಕಾರ ಯಾವ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಭ್ರಷ್ಟಾಚಾರದಲ್ಲಿಯೇ ಮುಂದುವರೆಯುವುದು ಯಾವ ನಾಗರಿಕ ಪ್ರಜೆಯೂ ಒಪ್ಪುವಂತಹದ್ದಲ್ಲ. ಅತ್ಯಂತ ಮುಖ್ಯ ಸ್ಥಾನದಲ್ಲಿರುವ ಸಂಘದ ನಾಯಕರೇ ರಾಜ್ಯದಲ್ಲಿ ಸಂಘ ಸಂಸ್ಕೃತಿಯನ್ನು ಬೆಳೆಸುವುದು ಆದ್ಯತೆಯಾಗಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>