ಕೆಲವು ಪತ್ರಕರ್ತರ ಭ್ರಷ್ಟಾಚಾರದ ಬಗ್ಗೆಯೂ ತನಿಖೆ ನಡೆಸಬೇಕು ಅನ್ನುವ ಸಚಿವ ರೇಣುಕಾಚಾರ್ಯ ಆಗ್ರಹ ಸಮರ್ಥನೀಯ. ಒಂದೆಡೆ ರಾಜಕಾರಣಿಗಳ ಮತ್ತು ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ಮಾಧ್ಯಮಗಳು ರಣ ದುಂದುಬಿ ಮೊಳಗಿಸಿದ್ದರೆ, ಇನ್ನೊಂದೆಡೆ ಕೆಲ ಪತ್ರಕರ್ತರು ಗಣಿಧೂಳಿನಿಂದಲೇ ಕೋಟ್ಯಧೀಶರಾಗಿದ್ದಾರೆ.
ಭ್ರಷ್ಟಾಚಾರದ ವಿರುದ್ಧದ ಮಾಧ್ಯಮ ಹೋರಾಟವನ್ನೇ ಈ ಪತ್ರಕರ್ತರು ದುರುಪಯೋಗಪಡಿಸಿಕೊಂಡಿದ್ದಾರೆ. ಕೆಲ ಪತ್ರಕರ್ತರ ಹೆಸರು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖ ಗೊಂಡಿರುವುದಾಗಿ ಹೇಳಲಾಗುತ್ತಿದೆ. ಸರ್ಕಾರ ಪತ್ರಕರ್ತರು ಭ್ರಷ್ಟಾಚಾರ ವಿರೋಧಿ ಹೋರಾಟವನ್ನು ಹಣಗಳಿಕೆಗೆ ದುರುಪಯೋಗಪಡಿಸಿಕೊಳ್ಳುವುದನ್ನು ತಪ್ಪಿಸಲು ತನಿಖೆಗೆ ಆದೇಶಿಸಬೇಕು.