‘ರಾಜಕಾರಣಿ’ಯೆಂಬೆನೆ ‘ರಾಜಧರ್ಮ’ವಿಲ್ಲವಯ್ಯಾ,
‘ನೇತಾರ’ನೆಂಬೆನೆ ‘ನೈತಿಕತೆ’ಯಿಲ್ಲವಯ್ಯಾ,
‘ಜನಸೇವಕ’ನೆಂಬೆನೆ ‘ಸೇವೆ’ಯಿಲ್ಲವಯ್ಯಾ,
ಇಂತಿ ತ್ರಿವಿಧದ ಗುಣವುಳ್ಳನ್ನಕ್ಕರ
ಭ್ರಷ್ಟಾಚಾರ, ಅಪರಾಧ, ಅರಾಜಕತೆಯೇ
ಪ್ರಜಾತಂತ್ರದ ಹೆಗಲೇರಿ ಕುಣಿಯುತ್ತಲಿರುವುದ ಕಂಡೆ,
ಸೋಸಿನೋಡಲು ಗೋಸುಂಬೆತನವೊಂದೇ
ಕಾಣಬರುವುದು ನೋಡಾ ಅಂತಃಸಾಕ್ಷಿ ದೇವಾ.