<p>ಇತ್ತೀಚೆಗೆ ಪ್ರತಿ ಮಹನೀಯರನ್ನೂ ಒಂದೊಂದು ಜಾತಿಗೆ ಕಟ್ಟುಹಾಕಿ, ಅದೇ ಜಾತಿಯವರಿಗೆ ಅವರ ಹೆಸರಿನ ಪ್ರಶಸ್ತಿಯನ್ನು ಸರ್ಕಾರ ಕೊಡುತ್ತಿದೆ. ಈ ಜಯಂತಿಗಳಲ್ಲಿ ಉಪಸ್ಥಿತರಿರುವ ವೇದಿಕೆಯ ಎಲ್ಲ ಗಣ್ಯರೂ ‘ಮಹಾವ್ಯಕ್ತಿ’ಗಳನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದೆಂದು ಹೇಳುತ್ತಲೇ ಅದೇ ಕೆಲಸವನ್ನು ಮುಂದುವರಿಸುತ್ತಿದ್ದಾರೆ.<br /> <br /> ಹಾಗೆಯೇ ಇವರ ಹೆಸರಿನಲ್ಲಿ ನೀಡುವ ಪ್ರಶಸ್ತಿಯ ಗೌರವ ಹಣದಲ್ಲೂ ತಾರತಮ್ಯವಿದೆ. ಬಸವಣ್ಣನವರ ಪ್ರಶಸ್ತಿಗೆ ₹ 10 ಲಕ್ಷ, ವಾಲ್ಮೀಕಿಗೆ ₹ 5 ಲಕ್ಷ, ಕನಕದಾಸರಿಗೆ ₹ 3 ಲಕ್ಷ... ಇತ್ಯಾದಿ.<br /> <br /> ಸರ್ಕಾರವು ವಿವಿಧ ಜಯಂತಿಗಳಿಗೆ ರಜಾ ನೀಡುವ ನೀತಿ ಸಹ ಸರಿಯಲ್ಲ. ಆ ರಜೆ, ಮೋಜಿನ ರಜೆಯಾಗಿ ಪರಿವರ್ತಿತವಾಗುತ್ತಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ, ಸಂವಿಧಾನ ಕರ್ತೃ ಡಾ.ಅಂಬೇಡ್ಕರ್ರವರ ಜಯಂತಿಯನ್ನುಳಿದು ಮತ್ತಿತರ ಮಹಾತ್ಮರ ಜಯಂತಿಗಳಿಗೆ ರಜೆ ನೀಡಿರುವುದನ್ನು ರದ್ದುಪಡಿಸಬೇಕು. ಜಯಂತಿಗಳನ್ನು ಆಚರಿಸುವುದು, ಪ್ರಶಸ್ತಿಗಳನ್ನು ನೀಡುವುದು ಚುನಾವಣಾ ದೃಷ್ಟಿಯನ್ನಿಟ್ಟುಕೊಂಡು ಆಯಾ ಸಮುದಾಯವನ್ನು ಸಂತೃಪ್ತಿಗೊಳಿಸುವ ಪ್ರಯತ್ನವಾಗಿದೆ.<br /> <br /> ಯಾವ್ಯಾವುದೋ ಕಾಲದ ಘಟನೆಗಳಿಗೆ ಪ್ರತಿಕ್ರಿಯಿಸುವ ನಮ್ಮ ಬುದ್ಧಿಜೀವಿಗಳು ಈ ಸಮಕಾಲೀನ ತಾರತಮ್ಯಗಳ ವಿರುದ್ಧ ಧ್ವನಿ ಎತ್ತುತ್ತಿಲ್ಲವೇಕೆ? ಮಹಾತ್ಮರ ವಿಚಾರಧಾರೆಗಳು, ಅವರ ಜೀವನದ ಬಗ್ಗೆ ಒಳ್ಳೆಯ ಸಾಹಿತ್ಯ, ಉಪನ್ಯಾಸಗಳು ಎಲ್ಲ ವರ್ಗದ, ಎಲ್ಲ ಧರ್ಮೀಯರಿಂದ, ಸಾಮಾಜಿಕ ಸಂಘಟನೆಗಳಿಂದ ಮೂಡಿಬರಲಿ. ಸರ್ಕಾರ ಏನಿದ್ದರೂ ಎಲ್ಲ ಒಳ್ಳೆಯ ಕೆಲಸಗಳಿಗೆ ಪ್ರೋತ್ಸಾಹ ನೀಡಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇತ್ತೀಚೆಗೆ ಪ್ರತಿ ಮಹನೀಯರನ್ನೂ ಒಂದೊಂದು ಜಾತಿಗೆ ಕಟ್ಟುಹಾಕಿ, ಅದೇ ಜಾತಿಯವರಿಗೆ ಅವರ ಹೆಸರಿನ ಪ್ರಶಸ್ತಿಯನ್ನು ಸರ್ಕಾರ ಕೊಡುತ್ತಿದೆ. ಈ ಜಯಂತಿಗಳಲ್ಲಿ ಉಪಸ್ಥಿತರಿರುವ ವೇದಿಕೆಯ ಎಲ್ಲ ಗಣ್ಯರೂ ‘ಮಹಾವ್ಯಕ್ತಿ’ಗಳನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದೆಂದು ಹೇಳುತ್ತಲೇ ಅದೇ ಕೆಲಸವನ್ನು ಮುಂದುವರಿಸುತ್ತಿದ್ದಾರೆ.<br /> <br /> ಹಾಗೆಯೇ ಇವರ ಹೆಸರಿನಲ್ಲಿ ನೀಡುವ ಪ್ರಶಸ್ತಿಯ ಗೌರವ ಹಣದಲ್ಲೂ ತಾರತಮ್ಯವಿದೆ. ಬಸವಣ್ಣನವರ ಪ್ರಶಸ್ತಿಗೆ ₹ 10 ಲಕ್ಷ, ವಾಲ್ಮೀಕಿಗೆ ₹ 5 ಲಕ್ಷ, ಕನಕದಾಸರಿಗೆ ₹ 3 ಲಕ್ಷ... ಇತ್ಯಾದಿ.<br /> <br /> ಸರ್ಕಾರವು ವಿವಿಧ ಜಯಂತಿಗಳಿಗೆ ರಜಾ ನೀಡುವ ನೀತಿ ಸಹ ಸರಿಯಲ್ಲ. ಆ ರಜೆ, ಮೋಜಿನ ರಜೆಯಾಗಿ ಪರಿವರ್ತಿತವಾಗುತ್ತಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ, ಸಂವಿಧಾನ ಕರ್ತೃ ಡಾ.ಅಂಬೇಡ್ಕರ್ರವರ ಜಯಂತಿಯನ್ನುಳಿದು ಮತ್ತಿತರ ಮಹಾತ್ಮರ ಜಯಂತಿಗಳಿಗೆ ರಜೆ ನೀಡಿರುವುದನ್ನು ರದ್ದುಪಡಿಸಬೇಕು. ಜಯಂತಿಗಳನ್ನು ಆಚರಿಸುವುದು, ಪ್ರಶಸ್ತಿಗಳನ್ನು ನೀಡುವುದು ಚುನಾವಣಾ ದೃಷ್ಟಿಯನ್ನಿಟ್ಟುಕೊಂಡು ಆಯಾ ಸಮುದಾಯವನ್ನು ಸಂತೃಪ್ತಿಗೊಳಿಸುವ ಪ್ರಯತ್ನವಾಗಿದೆ.<br /> <br /> ಯಾವ್ಯಾವುದೋ ಕಾಲದ ಘಟನೆಗಳಿಗೆ ಪ್ರತಿಕ್ರಿಯಿಸುವ ನಮ್ಮ ಬುದ್ಧಿಜೀವಿಗಳು ಈ ಸಮಕಾಲೀನ ತಾರತಮ್ಯಗಳ ವಿರುದ್ಧ ಧ್ವನಿ ಎತ್ತುತ್ತಿಲ್ಲವೇಕೆ? ಮಹಾತ್ಮರ ವಿಚಾರಧಾರೆಗಳು, ಅವರ ಜೀವನದ ಬಗ್ಗೆ ಒಳ್ಳೆಯ ಸಾಹಿತ್ಯ, ಉಪನ್ಯಾಸಗಳು ಎಲ್ಲ ವರ್ಗದ, ಎಲ್ಲ ಧರ್ಮೀಯರಿಂದ, ಸಾಮಾಜಿಕ ಸಂಘಟನೆಗಳಿಂದ ಮೂಡಿಬರಲಿ. ಸರ್ಕಾರ ಏನಿದ್ದರೂ ಎಲ್ಲ ಒಳ್ಳೆಯ ಕೆಲಸಗಳಿಗೆ ಪ್ರೋತ್ಸಾಹ ನೀಡಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>