<p>ಸಂದರ್ಭಕ್ಕೆ ತಕ್ಕಂತೆ ವೇಷ ಹಾಗೂ ಮಾತು ಬದಲಿಸುವವರನ್ನು ಓತಿಕ್ಯಾತಕ್ಕೆ ಹೋಲಿಸುವುದು ನಮ್ಮ ಸಾಮಾಜಿಕ ಸಂದರ್ಭದಲ್ಲಿ ತೀರಾ ಸಾಮಾನ್ಯ. ರಾಜಕಾರಣಿಗಳಿಗೂ ಇದನ್ನು ಅನ್ವಯಿಸಬಹುದೆಂಬುದು ಜನಪ್ರಿಯ ಬಜೆಟ್ ಮಂಡಿಸಿದ ಶೆಟ್ಟರ್ರವರಿಗೆ ಸಿಹಿ ತಿನ್ನಿಸುತ್ತಿರುವ ರೇಣುಕಾಚಾರ್ಯರ ಚಿತ್ರವನ್ನು ಪತ್ರಿಕೆಯಲ್ಲಿ ನೋಡಿದ ಮೇಲೆ ಸರಿಯೆನ್ನಿಸಿತು.<br /> <br /> ನರ್ಸ್ ಜೊತೆಗಿನ ರಾಸಲೀಲೆ, ಕುಮಾರಸ್ವಾಮಿಯವರ ಸರ್ಕಾರ ಬೀಳಿಸಲು ಶಾಸಕರನ್ನು ರೆಸಾರ್ಟ್ಗಳಲ್ಲಿ ಒತ್ತೆಯಾಳುಗಳಾಗಿ ಬಂಧಿಸಿಟ್ಟ ಪ್ರಕರಣ, ರೆಸಾರ್ಟ್ನಲ್ಲಿ ಶಾಸಕ ಗೆಳೆಯರೊಂದಿಗೆ ಸುಖಸಂಕಥಾಗೋಷ್ಠಿಯಲ್ಲಿ ಪಾಲುಗೊಂಡು ಅಲ್ಲಿಂದ ತಪ್ಪಿಸಿಕೊಂಡು ಬಂದು ಯಡಿಯೂರಪ್ಪನವರ ಗುಂಪಿನಲ್ಲಿ ಕಾಣಿಸಿಕೊಂಡ ಪ್ರಸಂಗ, `ಯಡಿಯೂರಪ್ಪ ನನ್ನ ನಾಯಕರು, ಅವರ ವಿರೋಧಿಗಳು ನನ್ನ ವಿರೋಧಿಗಳು' ಎಂದು ಪ್ರಮಾಣ ಮಾಡಿದ ಘಟನಾವಳಿ, ಈಗ ಯಡಿಯೂರಪ್ಪ ಪಾಳಯದಿಂದ ಶೆಟ್ಟರ್ ಪಾಳಯಕ್ಕೆ ವರ್ಗಾವಣೆಗೊಂಡ ರೇಣುಕಾಚಾರ್ಯರ ವಿಶ್ವರೂಪ, ಗಾಳಿ ಬಂದತ್ತ ತೂರಿಕೊಳ್ಳುವ ಅವಕಾಶವಾದಿ ಧೋರಣೆಯೆನ್ನಿಸುತ್ತದೆ.<br /> <br /> ರೇಣುಕಾಚಾರ್ಯರಂಥ ಊಸರವಳ್ಳಿಯಂಥ ಸಂಚಾರಿ ಭಾವದವರನ್ನು ಯಡಿಯೂರಪ್ಪ ನಂಬಿದರು, ಕಠಿಣ ಸಂದರ್ಭದಲ್ಲಿ ರಕ್ಷಿಸಿದರು, ಬೆಂಬಲಿಸಿದರು. ಬಟ್ಟೆ ಬದಲಿಸುವಂತೆ ಪಕ್ಷ ನಿಷ್ಠೆ ಬದಲಿಸುವ ರೇಣುಕಾಚಾರ್ಯರಂಥವರ ವರ್ತನೆಯಿಂದ ಯಡಿಯೂರಪ್ಪ ಪಾಠ ಕಲಿಯುವುದು ಒಳ್ಳೆಯದು. ರೇಣುಕಾಚಾರ್ಯರು ವಹಿಸಿಕೊಂಡಿರುವ ಖಾತೆಯ ಮಹಿಮೆಯೊ ಏನೋ! ಈ ನಾಟಕದ ಟ್ರಾನ್ಸ್ಫರ್ ಸೀನರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಂದರ್ಭಕ್ಕೆ ತಕ್ಕಂತೆ ವೇಷ ಹಾಗೂ ಮಾತು ಬದಲಿಸುವವರನ್ನು ಓತಿಕ್ಯಾತಕ್ಕೆ ಹೋಲಿಸುವುದು ನಮ್ಮ ಸಾಮಾಜಿಕ ಸಂದರ್ಭದಲ್ಲಿ ತೀರಾ ಸಾಮಾನ್ಯ. ರಾಜಕಾರಣಿಗಳಿಗೂ ಇದನ್ನು ಅನ್ವಯಿಸಬಹುದೆಂಬುದು ಜನಪ್ರಿಯ ಬಜೆಟ್ ಮಂಡಿಸಿದ ಶೆಟ್ಟರ್ರವರಿಗೆ ಸಿಹಿ ತಿನ್ನಿಸುತ್ತಿರುವ ರೇಣುಕಾಚಾರ್ಯರ ಚಿತ್ರವನ್ನು ಪತ್ರಿಕೆಯಲ್ಲಿ ನೋಡಿದ ಮೇಲೆ ಸರಿಯೆನ್ನಿಸಿತು.<br /> <br /> ನರ್ಸ್ ಜೊತೆಗಿನ ರಾಸಲೀಲೆ, ಕುಮಾರಸ್ವಾಮಿಯವರ ಸರ್ಕಾರ ಬೀಳಿಸಲು ಶಾಸಕರನ್ನು ರೆಸಾರ್ಟ್ಗಳಲ್ಲಿ ಒತ್ತೆಯಾಳುಗಳಾಗಿ ಬಂಧಿಸಿಟ್ಟ ಪ್ರಕರಣ, ರೆಸಾರ್ಟ್ನಲ್ಲಿ ಶಾಸಕ ಗೆಳೆಯರೊಂದಿಗೆ ಸುಖಸಂಕಥಾಗೋಷ್ಠಿಯಲ್ಲಿ ಪಾಲುಗೊಂಡು ಅಲ್ಲಿಂದ ತಪ್ಪಿಸಿಕೊಂಡು ಬಂದು ಯಡಿಯೂರಪ್ಪನವರ ಗುಂಪಿನಲ್ಲಿ ಕಾಣಿಸಿಕೊಂಡ ಪ್ರಸಂಗ, `ಯಡಿಯೂರಪ್ಪ ನನ್ನ ನಾಯಕರು, ಅವರ ವಿರೋಧಿಗಳು ನನ್ನ ವಿರೋಧಿಗಳು' ಎಂದು ಪ್ರಮಾಣ ಮಾಡಿದ ಘಟನಾವಳಿ, ಈಗ ಯಡಿಯೂರಪ್ಪ ಪಾಳಯದಿಂದ ಶೆಟ್ಟರ್ ಪಾಳಯಕ್ಕೆ ವರ್ಗಾವಣೆಗೊಂಡ ರೇಣುಕಾಚಾರ್ಯರ ವಿಶ್ವರೂಪ, ಗಾಳಿ ಬಂದತ್ತ ತೂರಿಕೊಳ್ಳುವ ಅವಕಾಶವಾದಿ ಧೋರಣೆಯೆನ್ನಿಸುತ್ತದೆ.<br /> <br /> ರೇಣುಕಾಚಾರ್ಯರಂಥ ಊಸರವಳ್ಳಿಯಂಥ ಸಂಚಾರಿ ಭಾವದವರನ್ನು ಯಡಿಯೂರಪ್ಪ ನಂಬಿದರು, ಕಠಿಣ ಸಂದರ್ಭದಲ್ಲಿ ರಕ್ಷಿಸಿದರು, ಬೆಂಬಲಿಸಿದರು. ಬಟ್ಟೆ ಬದಲಿಸುವಂತೆ ಪಕ್ಷ ನಿಷ್ಠೆ ಬದಲಿಸುವ ರೇಣುಕಾಚಾರ್ಯರಂಥವರ ವರ್ತನೆಯಿಂದ ಯಡಿಯೂರಪ್ಪ ಪಾಠ ಕಲಿಯುವುದು ಒಳ್ಳೆಯದು. ರೇಣುಕಾಚಾರ್ಯರು ವಹಿಸಿಕೊಂಡಿರುವ ಖಾತೆಯ ಮಹಿಮೆಯೊ ಏನೋ! ಈ ನಾಟಕದ ಟ್ರಾನ್ಸ್ಫರ್ ಸೀನರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>