ಕೆಂಪೇಗೌಡ ಬಸ್ ನಿಲ್ದಾಣದಿಂದ ದೇವನಹಳ್ಳಿಗೆ ತೆರಳುವ ಬಿ.ಎಂ.ಟಿ.ಸಿ. ಬಸ್ಸುಗಳ ಸಂಖ್ಯೆ ಕಡಿಮೆಯಿದೆ. ಸಂಜೆ ವೇಳೆ ಸುಮಾರು 5.30 ರಿಂದ 6.30ರ ವರೆಗೆ ಯಾವುದೇ ಬಸ್ಸು ಬರುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ, ಹಿರಿಯ ನಾಗರಿಕರಿಗೆ ಮತ್ತು ಮಹಿಳೆಯರಿಗೆ ಪ್ರಯಾಣ ಮಾಡಲು ಬಹಳ ತೊಂದರೆಯಾಗಿದೆ.
ದಯವಿಟ್ಟು ಈ ಸಮಯದಲ್ಲಿ ಹೆಚ್ಚು ಬಸ್ಸುಗಳು ಸಂಚರಿಸುವಂತೆ ಮಾಡಬೇಕಾಗಿದೆ. ಇನ್ನು ಕೆಲವು ಬಸ್ಸುಗಳು ಬಂದರೂ ಬಸ್ ನಿಲ್ದಾಣದಲ್ಲಿ ನಿಲ್ಲಿಸುವುದಿಲ್ಲ. ನಿರ್ವಾಹಕರನ್ನು ಕೇಳಿದರೆ ಬಸ್ನಲ್ಲಿ ಪುಲ್ ರಷ್ ಆಗಿದೆ ಎಂದು ಸುಳ್ಳು ನೆಪ ಕೊಡುತ್ತಾರೆ. ಇದರ ಬಗ್ಗೆ ಈ ಹಿಂದೆಯೂ ಸಾಕಷ್ಟು ಸಲ ಬರೆದುಕೊಂಡರೂ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ದೇವನಹಳ್ಳಿ ಮಾರ್ಗದ ಬಸ್ಸುಗಳ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಬೇಕೆಂದು ವಿನಂತಿ.