‘ಮನುಷ್ಯ ಜಾತಿ ತಾನೊಂದೇ ವಲಂ’ ರೂಪಕ ರಾಜ್ಯದಾದ್ಯಂತ ಪ್ರಸಾರವಾಗುತ್ತಿರುವುದು ಒಳ್ಳೆಯದೇ. ಜನಸಾಮಾನ್ಯರಿಗಿಂತಲೂ ಮಠಾಧೀಶರು, ರಾಜಕಾರಣಿಗಳು ಈ ರೂಪಕವನ್ನು ವೀಕ್ಷಿಸುವುದು ಅಗತ್ಯ. ರೂಪಕ ವೀಕ್ಷಿಸಿ ಅವರು ತಮ್ಮ ನಡೆ–ನುಡಿಯಲ್ಲಿ ತುಸು ಬದಲಾವಣೆ ಮಾಡಿಕೊಂಡರೆ ವಾರ್ತಾ ಇಲಾಖೆಯ ಪ್ರಯತ್ನ ನಿಜಕ್ಕೂ ಸಾರ್ಥಕ.