ತನ್ನ ವಿರುದ್ಧ ಎಸೆದ ಕಲ್ಲುಗಳನ್ನೇ ಮೆಟ್ಟಿಲು ಮಾಡಿಕೊಂಡು ಮೇಲೇರುವುದರಲ್ಲಿ ಮೋದಿ ಬಲು ಚಾಣಾಕ್ಷ. ಹಿಂದೊಮ್ಮೆ ಸೋನಿಯಾ ಗಾಂಧಿಯವರು ‘ಸಾವಿನ ವ್ಯಾಪಾರಿ’ ಎಂದು ಜರೆದದ್ದನ್ನೇ ಬಳಸಿಕೊಂಡಿದ್ದ ಮೋದಿ, ಗುಜರಾತಿಗರ ‘ಸ್ವಾಭಿಮಾನ’ ಕೆರಳಿಸಿ ಚುನಾವಣೆಯಲ್ಲಿ ಲಾಭ ಮಾಡಿಕೊಂಡದ್ದನ್ನು ಕಾಂಗ್ರೆಸ್ ಮರೆಯಬಾರದಿತ್ತು. ಒಟ್ಟಿನಲ್ಲಿ ಕಾಂಗ್ರೆಸ್, ಮೋದಿ ಕೈಗೆ ಮತ್ತೊಂದು ಅಸ್ತ್ರವನ್ನು ಇತ್ತು ಮೂರ್ಖತನ ಪ್ರದರ್ಶಿಸಿದೆ.