ಮಹಾದಾಯಿ ವಿವಾದ ಇತ್ಯಥ್ಯಕ್ಕೆ ಪ್ರಧಾನಿ ಮಧ್ಯಪ್ರವೇಶಿಸುವುದು ಉಚಿತ. ಕುಡಿಯುವ ನೀರಿನ ವಿಚಾರದಲ್ಲಿ ಪಕ್ಷ ರಾಜಕಾರಣ, ವ್ಯಕ್ತಿ ಪ್ರತಿಷ್ಠೆಗಳು ಸಲ್ಲದು. ರಾಜ್ಯದ ಎಲ್ಲ ಪಕ್ಷಗಳ ಮುಖಂಡರು ಈ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು. ಸಂಧಾನಕ್ಕೆ ವೇದಿಕೆ ಕಲ್ಪಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಗೋವಾದಲ್ಲಿಯೂ ಅದೇ ಪಕ್ಷದ ಸರ್ಕಾರ ಇದೆ. ಈ ಕಾರಣಕ್ಕಾಗಿ ಆ ಪಕ್ಷ ಅಲ್ಲಿನ ಮುಖ್ಯಮಂತ್ರಿಯವರ ಮನವೊಲಿಸುವ ಜವಾಬ್ದಾರಿ ಹೊರಬೇಕು. ಕರ್ನಾಟಕದ ಸ್ಥಿತಿಯನ್ನು ವಿವರಿಸಿ ಕುಡಿಯುವ ನೀರಿನ ಯೋಜನೆಗೆ ತಕರಾರು ತೆಗೆಯುವುದು ಬೇಡ ಎಂದು ಮನವಿ ಮಾಡಬೇಕು.