2000 ರಿಂದ 2008 ರವರೆಗೆ ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳ ವಿರುದ್ಧದ ಆಪಾದನೆಗಳ ತನಿಖೆ ನಡೆಸಲು ಸಂಬಂಧಿಸಿದ ದಾಖಲಾತಿಗಳು ಲೋಕಾಯುಕ್ತಕ್ಕೆ `ದೊರೆಯಲೇ ಇಲ್ವಂತೆ!
ಆದರೆ ಮತ್ತೊಂದು ರಾಜ್ಯದ ಮಾಜಿ ಮುಖ್ಯಮಂತ್ರಿ ವಿರುದ್ಧದ ಪ್ರಕರಣವು (1989-90) ಇಪ್ಪತ್ತಮೂರು ವರ್ಷದಷ್ಟು ಹಿಂದಿನದಾಗಿದ್ದರೂ ಇನ್ನೇನು ಎರಡು ದಿನಗಳಲ್ಲಿ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸ ಬೇಕು ಎನ್ನುವಾಗ ಅವರ ವಿರುದ್ಧದ ಆ ಪ್ರಕರಣ `ಖುಲಾಸೆ' ಆಯಿತಂತೆ!
ಇದರಿಂದ; ವೈಯುಕ್ತಿಕದ್ದೇ ಆಗಿರಲಿ, ಪ್ರತಿಪಕ್ಷ ಸರ್ಕಾರಗಳೇ ಆಗಿರಲಿ ಯಾವುದೇ ಆಪಾದನೆಗಳಿಗೆ ಒಳಪಟ್ಟಿದ್ದರೂ, ಅಮಾನತ್ಗೊಂಡಿದ್ದರೂ, ವಿಚಾರಣೆ ತೀರ್ಪು ತಡೆಹಿಡಿದಿದ್ದರೂ ಅವುಗಳಿಂದ ಬಂಧವಿಮುಕ್ತರಾಗಬೇಕಾದರೆ `ಯು.ಪಿ.ಎ. ಮೈತ್ರಿಯೇ ಸಂಜೀವಿನಿ' ಅಂತಾ ಆಯ್ತಲ್ಲಾ!