ಅನೇಕ ವರ್ಷಗಳಿಂದ ಓಕಳಿಪುರದ ಮುಖ್ಯರಸ್ತೆಯು ಅವ್ಯವಸ್ಥೆಯಿಂದ ಕೂಡಿದ್ದು, ಚಾಲಕರು ಕಷ್ಟಪಟ್ಟು ಈ ರಸ್ತೆಯಲ್ಲಿ ವಾಹನ ಚಾಲನೆ ಮಾಡಬೇಕಾಗಿದೆ. ಈ ಅವ್ಯವಸ್ಥೆ ಜೊತೆಗೆ ರಸ್ತೆಯು ಬರೀ ದೂಳಿನಿಂದ ಕೂಡಿದೆ. ಅಕ್ಕಪಕ್ಕದ ಅಂಗಡಿ ಮಾಲೀಕರು ದೂಳಿನ ಮಜ್ಜನ ಮಾಡಬೇಕಾಗಿದೆ. ಈ ಹಿಂದೆಯೂ ಇಲ್ಲಿನ ಶಾಸಕರೂ, ಮಂತ್ರಿಗಳೂ ಆದ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಕೊಟ್ಟಿದ್ದರೂ ಸಮಸ್ಯೆ ಬಗೆಹರಿದಿಲ್ಲ.
ದಯವಿಟ್ಟು ಈ ಕ್ಷೇತ್ರದ ಶಾಸಕರು ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಈ ರಸ್ತೆಗೆ ಬಂದು ನೋಡಲಿ. ಬಡವರೇ ಹೆಚ್ಚಾಗಿ ವಾಸಿಸುತ್ತಿರುವ ಈ ಪ್ರದೇಶದ ರಸ್ತೆಯನ್ನು ಆದಷ್ಟು ಬೇಗ ‘ದೂಳು ರಹಿತ’ ರಸ್ತೆಯನ್ನಾಗಿ ಮಾಡಬೇಕಾಗಿ ಮನವಿ.
–ಎ.ವಿ. ಶಾಮರಾವ್