ಮಾರತ್ಹಳ್ಳಿಯಿಂದ ವೈಟ್ಫೀಲ್ಡ್ ಕಡೆಗೆ ತೆರಳುವ ರಸ್ತೆಯೂ ಸಂಪೂರ್ಣ ಹದಗಟ್ಟಿದ್ದು, ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿದೆ. ಮಳೆಗಾಲದಲ್ಲಂತೂ ಈ ರಸ್ತೆಯ ಪರಿಸ್ಥಿತಿ ಕೇಳುವ ಹಾಗೆ ಇಲ್ಲ. ರಸ್ತೆಯಲ್ಲಿ ಬಿದ್ದ ಗುಂಡಿಗಳಲ್ಲಿ ನೀರು ತುಂಬಿ ರಸ್ತೆ ಕೆರೆಯಂತಾಗುತ್ತದೆ. ಆದರೆ ಈ ಬಗ್ಗೆ ಯಾರೂ ಗಮನ ಹರಿಸದೆ ಮಾರತ್ಹಳ್ಳಿಯಿಂದ ಎಚ್ಎಎಲ್ ಕಡೆಗೆ ತೆರಳುವ ಉತ್ತಮವಾಗಿರುವ ರಸ್ತೆ ಮೇಲೆ ಮತ್ತೆ ಡಾಂಬರೀಕರಣ ಮಾಡಿದ್ದಾರೆ. ಇದು ಯಾಕೆ ಎನ್ನುವುದು ಅರ್ಥವಾಗುತ್ತಿಲ್ಲ. ಇನ್ನಾದರೂ ಸರಿ ಇರುವುದನ್ನು ಮತ್ತೆ ರಿಪೇರಿ ಮಾಡುವ ಬದಲು, ಕೆಟ್ಟಿರುವ ರಸ್ತೆಯನ್ನು ದುರಸ್ತಿಗೊಳಿಸಿ.